Urdu   /   English   /   Nawayathi

ಸಾವಿಗೆ ಬೆನ್ನು ತೋರಿದ್ದೆ ಇಲ್ಲ, ಕೊನೆ ಉಸಿರಿರುವವರೆಗೂ ಗುಂಡು ಹಾರಿಸಿ ಹುತಾತ್ಮರಾದರು!

share with us

ನವದೆಹಲಿ: 16 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಭಾರತೀಯ ಯೋಧರು ಸಾವಿಗೆ ಬೆನ್ನು ತೋರಿದ್ದೆ ಇಲ್ಲ. ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಮ್ಮ ಕೊನೆಯ ಉಸಿರಿನವರೆಗೂ ಬಂದೂಕಿನ ಟ್ರಿಗರ್ ಒತ್ತುತ್ತಲೇ ಪ್ರಾಣ ಬಿಟ್ಟಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ಸುಟ್ಟು ಗಾಯಗಳಾಗಿದ್ದರು ಕೆಲ ಯೋಧರು ತಮ್ಮ ರೈಫಲ್ ಹಿಡಿದು ಕೆಲ ಸುತ್ತು ಗುಂಡು ಹಾರಿಸಿ, ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟ ಯೋಧರಲ್ಲಿ ಅನೇಕರ ಕೈ ಬೆರಳುಗಳು ರೈಫಲ್ನ ಟ್ರಿಗರ್ನಲ್ಲಿದ್ದವು. ರಣ ಹೇಡಿಗಳಂತೆ ಆಕ್ರಮಣ ಮಾಡಿದ ಉಗ್ರರ ವಿರುದ್ಧ, ಹೋರಾಡಿಯೇ ಪ್ರಾಣ ಬಿಟ್ಟಿದ್ದಾರೆ. ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಅದಿಲ್ ಅಹ್ಮದ್ ದಾರ್ ಎಸ್ ಯುವಿ ವಾಹನದಲ್ಲಿ ತುಂಬಿದ್ದ 300 ಕೆಜಿ ಸ್ಫೋಟಕದೊಂದಿಗೆ  ಸಿಆರ್ಪಿಎಫ್ ಯೋಧರನ್ನು ಒಯ್ಯುತ್ತಿದ್ದ ಬಸ್ಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا