Urdu   /   English   /   Nawayathi

ವಿನಯ್ ಕಿಡ್ನಾಪ್ ಕೇಸ್: ಯಡಿಯೂರಪ್ಪ ಪಿಎ ಸಂತೋಷ್​ ಜಾಡು ಹಿಡಿದ ಸಿಸಿಬಿ

share with us

ಬೆಂಗಳೂರು: 11 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿಂತೆ ಸಿಸಿಬಿ ಈಗಾಗ್ಲೇ ತನಿಖೆಯನ್ನು ತೀವ್ರಗೊಳಿಸಿದೆ. ಈ ಕುರಿತು ಸಾಕ್ಷ್ಯಾಧಾರಗಳನ್ನು ಕಲೆ ಹಾಕಲು ಅಧಿಕಾರಿಗಳು ಸಿದ್ಧರಾಗಿದ್ದಾರೆ. ಈ ಪ್ರಕರಣಕ್ಕೆ ಡೈರಿ, ಮಾಡೆಲ್ ಹಾಗೂ ‌ಯಡಿಯೂರಪ್ಪ ಪಿಎ ಸಂತೋಷ್ ಫೋನ್ ರೆಕಾರ್ಡ್ ಪ್ರಮುಖವಾಗಿವೆ. ಈ ಸಾಕ್ಷ್ಯಾಧಾರಗಳ ಮಾಹಿತಿಯನ್ನ ಸಿಸಿಬಿ ಕಲೆ ಹಾಕ್ತಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ತನಿಖೆಯನ್ನು ಮೊದಲು ಮಹಾಲಕ್ಷೀ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ವೇಳೆ ತನಿಖೆ ಕೈಗೊಂಡಿದ್ದ ಮಹಾಲಕ್ಷೀ ಲೇಔಟ್ ಪೊಲೀಸರಿಗೆ ಸಂತೋಷ್ ಮೊಬೈಲ್ ರೆಕಾರ್ಡ್ ನೀಡಲು ಹಿಂದೇಟು ಹಾಕಿದ್ದರಂತೆ. ನಂತರ ಈ ಕುರಿತು ಮಹಾಲಕ್ಷೀ ಲೇಔಟ್ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ರು. ಇದೀಗ ಸಿಸಿಬಿ‌ ಪೊಲೀಸರು ಈ ಪ್ರಕರಣದಲ್ಲಿ ತಳುಕಿ ಹಾಕಿದ ಮಾಡೆಲ್, ಯಡಿಯೂರಪ್ಪ ಪಿಎ ಸಂತೋಷ್ ಮೊಬೈಲ್​ಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ತನಿಖೆಗೆ ಸಹಕರಿಸುವಂತೆ ಯಡಿಯೂರಪ್ಪ ಪಿಎ ಸಂತೋಷ್​ಗೆ ನೋಟಿಸ್ ನೀಡಲಾಗಿದೆ. ಆದ್ರೆ ಸಂತೋಷ್ ಇನ್ನೂ ಕೂಡ ಮುಂಬೈಯಲ್ಲಿದ್ದಾರೆ ಎಂದು ಹೇಳಲಾಗ್ತಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا