Urdu   /   English   /   Nawayathi

ಹಣದ ವಿಚಾರಕ್ಕೆ ಜಗಳ... ತಂದೆಗೆ ಚಾಕುವಿನಿಂದ ಇರಿದ ಮಗ!

share with us

ಬೆಂಗಳೂರು: 10 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಹಣದ ವಿಚಾರಕ್ಕೆ ಜಗಳ ನಡೆದು ತಂದೆಗೆ ಮಗನೇ ಚಾಕುವಿನಿಂದ ಇರಿದಿರುವ ಘಟನೆ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗ ಸಂತೋಷ್ ತನ್ನ ತಂದೆ ರಾಜಣ್ಣ ನಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ರಾಜಣ್ಣನನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಸ್ಫಷ್ಟನೆ ನೀಡಿದ್ದು, ಇಂದು ನಸುಕಿನ ಜಾವ 3-30 ರ ಸುಮಾರಿಗೆ ಘಟನೆ ನಡೆದಿದೆ. ಸಂತೋಷ್ ಅಲಿಯಾಸ್ ಸ್ಕ್ರಾಪ್ ನಿನ್ನೆ ತಡರಾತ್ರಿ ಇಸ್ಪೀಟ್ ಆಟವಾಡಿ ದುಡ್ಡು ಕಳೆದುಕೊಂಡಿದ್ದ. ಬಳಿಕ ಹೆಚ್ಚಿನ ಹಣಕ್ಕಾಗಿ ತಂದೆಯ ಬಳಿ ಬೇಡಿಕೆ ಇಟ್ಟಿದ್ದನಂತೆ. ಈ ವೇಳೆ ಗಲಾಟೆಯಾಗಿ ಮಗ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿಸಿದ್ದಾರೆ. ಘಟನೆ ಬಗ್ಗೆ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸಂತೋಷ್ ವಿರುದ್ಧ ಈಗಾಗಲೇ ಕಳ್ಳತನ ಆರೋಪದ ಮೇಲೆ ಕೆಲ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا