Urdu   /   English   /   Nawayathi

ಲೋಕಸಭಾ ಚುನಾವಣೆ: 'ನಾವು ಗೆಳೆಯರ ಬಳಗ ವೇದಿಕೆ'ಯಿಂದ ಪ್ರಕಾಶ್ ರಾಜ್ ಗೆ ಬೆಂಬಲ

share with us

ಶಿವಮೊಗ್ಗ: 10 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ನಾವು ಗೆಳೆಯರ ಬಳಗ ಬೆಂಬಲ ವ್ಯಕ್ತಪಡಿಸಿದೆ. ಆ ಕ್ಷೇತ್ರದಿಂದ ಇತರ ಪಕ್ಷಗಳು ಅಭ್ಯರ್ಥಿಗಳನ್ನು ಹಾಕದಂತೆ ಮನವಿ ಮಾಡಿಕೊಂಡಿದೆ. ಪ್ರಕಾಶ್ ರಾಜ್ ಒಬ್ಬ ಕಲಾವಿದರಾಗಿ ಬಹುದೊಡ್ಡದಾದ ಸಾಮಾಜಿಕ ಜವಾಬ್ದಾರಿ ಇದೆ. ಸುಮಾರು 200 ಸಂಸ್ಥೆಗಳೊಂದಿಗೆ ವೇದಿಕೆ ಸ್ಥಾಪನೆಯಾಗಿ 400ಕ್ಕೂ ಹೆಚ್ಚು ಲೇಖಕರು ಜೊತೆಯಲ್ಲಿರುವುದಾಗಿ ಸಂಘಟಕರಾದ ಕೆಎಲ್ ಅಶೋಕ್ ಹಾಗೂ ಕೆಪಿ ಶ್ರೀಪಾಲ್ ತಿಳಿಸಿದರು ಪ್ರಕಾಶ್ ರಾಜ್ ಅನೇಕ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗಾಗಿ ದತ್ತು ಪಡೆದಿದ್ದಾರೆ ನಿರ್ಲಕ್ಷಿತ ಸಮುದಾಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪ್ರಜಾಪ್ರಜಾಪ್ರಭುತ್ವದ ಉದ್ದೇಶದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ. ರಾಜಕೀಯ ಪಕ್ಷಗಳು ರಾಜಕಾರಣ ಮಾಡಲು ಜಾತಿ, ಹಣ, ಮತ್ತು ಮದ್ಯವನ್ನು ಬಳಸುತ್ತವೆ ಮತ್ತು ಉದ್ಯಮಿಗಳು ರಾಜಕೀಯ ಪಕ್ಷಗಳಿಂದ ರಕ್ಷಣೆ ಪಡೆದುಕೊಳ್ಳುತ್ತಿವೆ ಎಂದು ಅವರು ಟೀಕಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا