Urdu   /   English   /   Nawayathi

ಅನಂತ್ ಕುಮಾರ್ ಹೆಗಡೆ ಪ್ರತಿಯೊಬ್ಬ ಭಾರತೀಯರನ್ನು ಮುಜುಗರಪಡಿಸಿದ್ದಾರೆ- ರಾಹುಲ್

share with us

ನವದೆಹಲಿ: 28 ಜನುವರಿ (ಫಿಕ್ರೋಖಬರ್ ಸುದ್ದಿ) ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಮೂಲಕ ಪ್ರತಿಯೊಬ್ಬ ಭಾರತೀಯರನ್ನು ಮುಜುಗರಪಡಿಸಿದ್ದಾರೆ ಎಂದು  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.  ಸಚಿವರಾಗೂ ಯೋಗ್ಯತೆ ಇಲ್ಲದ ಅನಂತ್ ಕುಮಾರ್ ಹೆಗಡೆ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಅನಂತ್ ಕುಮಾರ್ ಹಗಡೆ  ಕೊಡಗಿನಲ್ಲಿ ಕಾರ್ಯಕ್ರಮವೊಂದರಲ್ಲಿ ಹಿಂದೂ ಯುವತಿಯರ ರಕ್ಷಣೆ ವಿಚಾರದಲ್ಲಿ ಮಾತನಾಡುತ್ತಾ, ಹಿಂದೂ ಯುವತಿಯರನ್ನು ಮುಟ್ಟಿದ್ದರೆ ಅವರ ಕೈ ಕತ್ತರಿಸಬೇಕು ಎಂದು ಹೇಳಿದ್ದರು. ಆಗ್ರಾದಲ್ಲಿನ  ಪ್ರೇಮ ಸೌಧ ತಾಜ್ ಮಹಲ್ ನ್ನು  ಮುಸ್ಲಿಂರು ಕಟ್ಟಿಲ್ಲ.  ಅದೊಂದು ಶಿವ ಮಂದಿರವಾಗಿತ್ತು. ತೇಜೊ ಮಹಾಲಯ ಎಂದು ಕರೆಯಲಾಗುತ್ತಿತ್ತು.

 

Rahul Gandhi✔@RahulGandhi

This man is an embarrassment to every Indian. He's unfit to be a Union Minister and deserves to be sacked. https://www.ndtv.com/india-news/union-minister-anantkumar-hegde-after-hindu-girl-comment-targets-rival-dinesh-gundu-raos-muslim-wife-1984174 …

8,305

3:46 PM - Jan 28, 2019

Twitter Ads info and privacy

4,779 people are talking about this

ಇತಿಹಾಸದಲ್ಲಿ ಇದರ ಬಗ್ಗೆ ಉಲ್ಲೇಖವಿದೆ. ರಾಜ ಜಯಸಿಂಹನಿಂದ ಈ ಅರಮನೆಯನ್ನು  ಕೊಂಡುಕೊಂಡಿದ್ದಾಗಿ ಷಹಜಾನ್ ತನ್ನ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾನೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಶಿವ ಮಂದಿರವಾಗಿದ್ದ ತಾಜ್ ಮಹಲ್ ನ್ನು ಪರಮತೀರ್ಥ ದೊರೆ ಸ್ಥಾಪನೆ ಮಾಡಿದ್ದರು. ತೇಜೊ ಮಹಾಲಯ ನಂತರ ತಾಜ್ ಮಹಲ್ ಆಗಿ ರೂಪುಗೊಂಡಿದೆ. ಹಿಂದೂಗಳು ಹೀಗೆ ಮಲಗಿದ್ದರೆ ಭವಿಷ್ಯದಲ್ಲಿ ನಮ್ಮ ಮನೆಗಳು ಮಸೀದಿಯಾಗಲಿವೆ. ರಾಮನನ್ನು ಜಹಾನ್ ಪನಾ, ಸೀತೆಯನ್ನು ಬಿಬಿ ಎಂದು ಕರೆಯಬೇಕಾಗುತ್ತದೆ ಎಂದಿದ್ದರು. ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಅಥವಾ ಸಂಸದರಾಗಿ ಅನಂತ್ ಕುಮಾರ್ ಹೆಗಡೆ ಏನು ಸಾಧನೆ ಮಾಡಿದ್ದಾರೆ. ಕರ್ನಾಟಕ ಅಭಿವೃದ್ದಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا