Urdu   /   English   /   Nawayathi

ಅಂತ್ಯಕ್ರಿಯೆಗೆ ಹೊರಟವರ ಜೀವನವೇ ಅಂತ್ಯ, ಕಂದಕಕ್ಕೆ ಬಸ್​ ಉರುಳಿ ಎಂಟು ಸಾವು

share with us

ಡೆಹ್ರಾಡೂನ್​: 27 ಜನುವರಿ (ಫಿಕ್ರೋಖಬರ್ ಸುದ್ದಿ) ಅಂತ್ಯಕ್ರಿಯೆಗೆ ತೆರಳುತ್ತಿದ್ದ ಬಸ್​ವೊಂದು ಕಂದಕಕ್ಕೆ ಉರುಳಿದ ಪರಿಣಾಮ ಎಂಟು ಮಂದಿ ಸಾವಿಗೀಡಾಗಿರುವ ಘಟನೆ ಉತ್ತರಾಖಂಡ್​ನ ಚಂಪಾವತ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಸ್ಮಶಾನದ ಕಡೆಗೆ ಹೊರಟಿದ್ದ ಬಸ್​ ಅಕಸ್ಮಾತಾಗಿ ಕಂದಕಕ್ಕೆ ಉರುಳಿದ ಪರಿಣಾಮ ಈ ದುರ್ಘಟನೆ ಜರುಗಿದೆ. ದುರಂತದಲ್ಲಿ ಹನ್ನೆರಡು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಚಂಪಾವತ್​ ಪೊಲೀಸ್​ ವರಿಷ್ಠಾಧಿಕಾರಿ ಧೀರೇಂದ್ರ ಗುಂಜ್ಯಾಲ್​ ತಿಳಿಸಿದ್ದಾರೆ. ಕಂದಕದಲ್ಲಿ ಇನ್ನಷ್ಟು ಜನರ ಮೃತದೇಹಗಳು ಇರಬಹುದೆಂದು ಶಂಕಿಸಲಾಗಿದ್ದು, ಸದ್ಯ ಕಾರ್ಯಾಚರಣೆ ನಡೆಯುತ್ತಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا