Urdu   /   English   /   Nawayathi

ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ: ಅಧಿವೇಶನದ ಮೊದಲ ದಿನ ಬಿಜೆಪಿಯಿಂದ ಹೋರಾಟದ ಎಚ್ಚರಿಕೆ

share with us

ಬೆಂಗಳೂರು: 23 ಜನುವರಿ (ಫಿಕ್ರೋಖಬರ್ ಸುದ್ದಿ) ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಸಚಿವ ಪುಟ್ಟರಂಗಶೆಟ್ಟಿಯಿಂದ ರಾಜೀನಾಮೆ ಪಡೆದು ಸತ್ಯಾಂಶವನ್ನು ಜನತೆಗೆ ಹೇಳದೇ ಇದ್ದಲ್ಲಿ ಅಧಿವೇಶನದ ಮೊದಲ ದಿನವೇ ಬಿಜೆಪಿ ಸದನದಲ್ಲಿ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಯವ್ಯಯ ಸಿದ್ಧತೆಗಳು ಹಾಗೂ ಜಂಟಿ ಅಧಿವೇಶನದ ಸಿದ್ಧತೆಗಳನ್ನು ಸರ್ಕಾರ ಮಾಡಿಕೊಳ್ಳುತ್ತಿದೆ. ಆದರೆ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧವೇ ಭ್ರಷ್ಟಾಚಾರಕ್ಕೆ ತಾಣವಾಗಿದೆ. ವಿಧಾನಸೌಧದಲ್ಲಿ ಸಿಕ್ಕ ಅಕ್ರಮ ಹಣ ಸಂಬಂಧ ಸಚಿವ ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಪಡೆದಿಲ್ಲ. ಸಚಿವರಿಂದ ಹೇಳಿಕೆಯನ್ನೂ ಪಡೆದಿಲ್ಲ. ಭ್ರಷ್ಟಾಚಾರ ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ. ಅಧಿವೇಶನದೊಳಗೆ ಈ ಬಗ್ಗೆ ಸರ್ಕಾರ ವರದಿ ಮಂಡಿಸಬೇಕು. ರಾಜ್ಯದ ಜನತೆಗೆ ಸತ್ಯಾಂಶ ಹೇಳದೇ ಇದ್ದಲ್ಲಿ ಅಧಿವೇಶನದ ಮೊದಲ ದಿನವೇ ಬಿಜೆಪಿ ಹೋರಾಟ ನಡೆಸಲಿದೆ ಎಂದರು. ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಸಂಭಾಷಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಸರ್ಕಾರ ರಜಾ ದಿವಸ ಎಂದು ಸುತ್ತೋಲೆ‌ ಹೊರಡಿಸಿದ್ದರೂ ಐಷಾರಾಮಿ ಅಶೋಕ ಹೋಟೆಲ್​ನಲ್ಲಿ ಸಂವಿಧಾನ ಸಂಭಾಷಣೆ ಹೆಸರಿನಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸಲಾಗಿದೆ. ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ಕನ್ಹಯ್ಯ ಕುಮಾರ್, ವಿವಾದಾತ್ಮಕ ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಕರೆಸಿ ಕಾರ್ಯಕ್ರಮ ಮಾಡಿದ್ದಾರೆ. ಆ ಮೂಲಕ ಶ್ರೀಗಳಿಗೆ ಅಪಮಾನ ಮಾಡಲಾಗಿದೆ ಎಂದರು.

ರೆಸಾರ್ಟ್​ನಲ್ಲಿ ಆನಂದ್ ಸಿಂಗ್, ಗಣೇಶ್ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ರೆಸಾರ್ಟ್ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರೀಕ್ಷಿಸಬೇಕು. ಶಾಸಕರ ಹಲ್ಲೆ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು. ರಾಜ್ಯದ ಜ‌ನರಿಗೆ ಹೇಳಿಕೆ ಕೊಡಬೇಕು ಎಂದು ಒತ್ತಾಯಿಸಿದರು. ರಾಜಕಾರಣದಲ್ಲಿ ಪೈಪೋಟಿ ಹೋರಾಟ ಮಾಡಲು ತಮಗೂ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಅವರ ಪಕ್ಷದ‌ ಶಾಸಕರೇ ಹೊಡೆದಾಡಿಕೊಳ್ಳುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಸಿದ್ದರಾಮಯ್ಯರ ಕಾಲೆಳೆದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا