Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ಬೆಂಗಳೂರು: 16 ಜನುವರಿ (ಫಿಕ್ರೋಖಬರ್ ಸುದ್ದಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಂತೆ ನಟಿಸಿ ಹೆಸರಾಂತ ದಿನಪತ್ರಿಕೆಯೊಂದರ ಪತ್ರಕರ್ತನಿಗೆ 80 ಸಾವಿರ ರು. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಂಚನೆಗೀಡಾಗಿರುವ ಪತ್ರಕರ್ತ ಇದೀಗ ಪೋಲೀಸರಿಗೆ ದೂರು ಸಲ್ಲಿಸಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ. ಜನವರಿ 6ರಂದು ನಗರದ ಕುಮಾರ ಕೃಪಾ ರಸ್ತೆಯಲ್ಲಿ ನಡೆದಿದ್ದ ಚಿತ್ರಸಂತೆಯ ಸಮಯ ಈ ವಂಚನೆ ನಡೆದಿದೆ. ಚಿತ್ರಸಂತೆಯ ವರದಿಗಾಗಿ ಬಂದಿದ್ದ ಪತ್ರಕರ್ತನನ್ನು ಆರೋಪಿ ತಾನು ಸ್ಟೇಟ್ ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ಹಾಗೆಯೇ ಆತ ಪತ್ರಕರ್ತನ ಬ್ಯಾಂಕಿಂಗ್ ವಿವರಗಳನ್ನು ಕಲೆ ಹಾಕಿದ್ದು ಅಂತಿಮವಾಗಿ ಖಾತೆಯಲ್ಲಿದ್ದ 80 ಸಾವಿರ ರು. ಎಗರಿಸಿದ್ದಾನೆ. ಸುರೇಶ್ (ಹೆಸರು ಬದಲಿಸಿದೆ) ಸಲ್ಲಿಸಿರುವ ದೂರಿನನ್ವಯ ಅವರು ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದಿದ್ದ ಚಿತ್ರಸಂತೆಯ ಕುರಿತು ವರದಿ ಮಾಡಲು ತೆರಳಿದ್ದಾರೆ.. "ನಾನು ಎಟಿಎಂ ಒಳಗೆ ಹೋದಾಗ, ಆತ ನನಗೆ ಆನ್ ಲೈನ್ ಬ್ಯಾಂಕಿಂಗ್ ಸೇವೆ ಚಾಲನೆ ಮಾಡಿಕೊಡುವುದಾಗಿ ಹೇಳಿದ್ದ.ನಾನು ಇದಾಗಲೇ ಸ್ವಲ್ಪ ದಿನಗಳಿಂದ ಅದನ್ನು ಚಾಲನೆಗೊಳಿಸಲು ಪ್ರಯತ್ನಿಸುತ್ತಿದ್ದೆನಾಗಿ ಅವರ ಮಾತುಗಳಿಗೆ ಒಪ್ಪಿಗೆ ನೀಡಿದ್ದೆ.ಮೊದಲು ಅವನು ನನ್ನ ಮೊಬೈಲ್ ನಿಂದ ಸೇವೆಯನ್ನು ಚಾಲನೆ ಮಾಡಲು ಪ್ರಯತ್ನಿಸಿದ, ಆಗ ಸೇವೆ ಚಾಲನೆ ಆಗದೆ ಹೋಗಲು ಅವನದೇ ಮೊಬೈಲ್ ಬಳಸಿದ್ದಾನೆ. "ತನ್ನ ಅಂತರ್ಜಾಲ ಬ್ಯಾಂಕಿಂಗ್ ಸೇವೆಗಳನ್ನು ಸಕ್ರಿಯಗೊಳಿಸುವ ನಿಮಿತ್ತ, ಅಜ್ಞಾತ ಆರೋಪಿ ನನ್ನ ಮೊಬೈಲ್ ಗೆ ಬಂದಿದ್ದ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ)ಯನ್ನು ಬಹಿರಂಗಗೊಳಿಸಲು ಕೇಳಿದ್ದ. ಬಳಿಕ ನನ್ನ ಎಟಿಎಂ ಕಾರ್ಡ್ ತೆಗೆದುಕೊಂಡು ಅದನ್ನು ಸ್ಥಳದಲ್ಲಿದ್ದ ಎಟಿಎಂ ಮೆಷಿನ್ ನಲ್ಲಿ ಸ್ವೈಪ್ ಮಾಡಲು ಹೇಳಿದ್ದಾನೆ.ಬಳಿಕ ಆತ ಇಂಟರ್ ನೆಟ್ ಬ್ಯಾಂಕಿಂಗ್ ಗಾಗಿನ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಗಳನ್ನು ರಚಿಸಿದ್ದು ಅದನ್ನು ನನಗೆ ನೀಡಿದ್ದನು. "ಇದಾದ ಬಳಿಕ ಕೆಲ ದಿನಗಳ ಕಾಲ ಏನೊಂದು ವಿಶೇಷ ಸಂಗತಿ ನಡೆಯಲಿಲ್ಲ. ಆದರೆ ಶನಿವಾರದಂದು (ಜನವರಿ 12) 12.01ರ ಮದ್ಯರಾತ್ರಿಯ ಸಮಯಕ್ಕೆ ನನ್ನ ಮೊಬೈಲ್ ಗೆ ಎಚ್ಚರಿಕೆ ಸಂದೇಶ ಬಂದಿದೆ. ಅದರಲ್ಲಿ ಮೂರು ಆವೃತ್ತಿಗಳಲ್ಲಿ ನನ್ನ ಖಾತೆಯಲ್ಲಿದ್ದ 60,000 ರು. ವಿತ್ ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿದೆ. ನಾನು ಎಟಿಎಂ ಕಾರ್ಡ್ ನಿರ್ಬಂಧಿಸಿದ್ದಲ್ಲದೆ ಪೋಲೀಸರಿಗೆ ದೂರು ಸಲ್ಲಿಸಿದೆ" ಸತೀಶ್ ಪತ್ರಿಕೆಗೆ ವಿವರಿಸಿದರು.
ಸುರೇಶ್ ಹೇಳಿಕೆಯಂತೆ ಅವರ ಖಾತೆಯಿಂದ ಕೇವಲ 60 ಸಾವಿರ ರು.ಹಿಂಪಡೆಯಲಾಗಿದೆ. ಆದರೆ ಬ್ಯಾಂಕ್ ಹೇಳಿಕೆಯಂತೆ ಸುರೇಶ್ ಆನ್ ಲೈನ್ ಬ್ಯಾಂಕಿಂಗ್ ಸೇವೆ ಪ್ರಾರಂಭ ಮಾಡಿದಾಗಿನಿಂದ ಒಟ್ಟು 80,000 ರು. ಡ್ರಾ ಮಾಡಿದ್ದಾರೆ. "ಅವರು ಎಟಿಎಂ ಒಳಗೆ ಇದ್ದ ಕಾರಣ ನಾನು ಅವರನ್ನು ನಂಬಿದ್ದೆನು. ತನಿಖೆಯ ನಂತರ, ಪೋಲೀಸರು ಆರೋಪಿಯು ಜಾರ್ಖಂಡ್ ನ ರೈಲು ನಿಲ್ದಾಣದಲ್ಲಿ ಹಣ ವಿತ್ ಡ್ರಾ ಮಾಡಿದ್ದಾರೆ ಎನ್ನುತ್ತಿದ್ದಾರೆ.ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪ್ರಕರಣವನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತನಿಖೆಗಾಗಿ ವರ್ಗಾಯಿಸಲಾಗಿದೆ.
ಕ, ಪ್ರ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |