Urdu   /   English   /   Nawayathi

ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

share with us

ಮಂಗಳೂರು: 15 ಜನುವರಿ (ಫಿಕ್ರೋಖಬರ್ ಸುದ್ದಿ) ಮಂಗಳೂರು ಸಿ,ಸಿ,ಬಿ ಪೋಲೀಸರು ಮತ್ತು ಇವರ ಗುಂಪೊಂದು ಸೇರಿ ಕಾರ್ಯಾಚರಣೆ ನಡೆಸಿ ನಗರದಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಮೋರ್ಗನ್ಗೇಟಿನ ಬಳಿ ಇರುವ ಮೈದಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕೆಲವು ಸಾರ್ವಜನಿಕರಿಗೆ ಗಾಂಜಾ ಒದಗಿಸುತ್ತಿರುವ ವೇಳೆ ದೊರಕಿದ ಖಚಿತ ಮಾಹಿತಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳ ಜೊತೆ ಕೆಲವು ವಿದ್ಯಾರ್ಥಿಗಳನ್ನೂ ಸಹ ಪೋಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧನದಲ್ಲಿರುವವರು ಕೇರಳ ಕರಿಪ್ರ ಗ್ರಾಮದ ನಿವಾಸಿ ಅಕ್ಷಯ್ ಕೆ ಪ್ರಸಾದ್(22), ಕೇರಳ ಕಣ್ಣೂರಿನ ನಿವಾಸಿಗಳಾದ ಸಿಮಿಲ್(21), ಆಕಾಶ್ ನಾಯರ್(23), ಅಕ್ಷಯ್(22) ಅಮಿತ್ ಶ್ರೀವತ್ಸ(21), ಅಶ್ವಿನ್(21) ಹಾಗೂ ಮುಹಮ್ಮದ್ ಅಮೀರ್(22). ಮಂಗಳೂರಿನ ಹೊರವಲಯದ ಬೋರುಗುಡ್ಡೆಯ ನಿವಾಸಿ ಜಾಫರ್(22) ಎಂದು ಹೇಳಲಾಗಿದೆ. ಇವರೊಂದಿಗೆ ಸುಮಾರು ಇಪ್ಪತ್ತೊಂದು ಸಾವಿರ ರೂ ಬೆಲೆಯ 500 ಗ್ರಾಂ ಗಾಂಜಾ, 4,050/- ನಗದು ಹಣ ಎರಡು ದ್ವಿಚಕ್ರ ವಾಹನ ಮತ್ತು 8 ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا