Urdu   /   English   /   Nawayathi

ಬುಲಂದ್‌ಶಹರ್‌: ಎಸ್‌ಐ ಹತ್ಯೆ ಆರೋಪಿ BJP ಯುವ ಮೋರ್ಚಾ ನಾಯಕ ಅರೆಸ್ಟ್‌

share with us

ಹೊಸದಿಲ್ಲಿ: 10 ಜನುವರಿ (ಫಿಕ್ರೋಖಬರ್ ಸುದ್ದಿ) ಉತ್ತರ ಪ್ರದೇಶದ ಬುಲಂದ್‌ ಶಹರ್‌ ಹಿಂಸೆಯಲ್ಲಿ ನಡೆದಿದ್ದ ಪೊಲೀಸ್‌ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್‌ ಅಗರ್‌ವಾಲ್‌ ಎಂಬಾತನನ್ನು ಪೊಲೀಸರು ಉತ್ತರ ಪ್ರದೇಶದ ಹಾಪುರ್‌ ನಲ್ಲಿ ಇಂದು ಗುರುವಾರ ನಸುಕಿನ ವೇಳೆಯಲ್ಲಿ ಬಂಧಿಸಿದ್ದಾರೆ. ಗೋಹತ್ಯೆಗೆ ಸಂಬಂಧಿಸಿ ಬುಲಂದ್‌ಶಹರ್‌ನಲ್ಲಿ  ಕಳೆದ ವರ್ಷ ಡಿ.3ರಂದು ಭುಗಿಲೆದ್ದಿದ್ದ ಹಿಂಸೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌ ಮತ್ತು ಸುಮಿತ್‌ ಕುಮಾರ್‌ ಎಂಬ ತರುಣನನ್ನು ಉದ್ರಿಕ್ತ ಜನಸಮೂಹ ಚಚ್ಚಿ ಕೊಂದಿತ್ತು. ಇದಕ್ಕೆ ಶಿಖರ್‌ ಅಗರ್‌ವಾಲ್‌ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ.

ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ  ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್‌ ಅಗರ್‌ವಾಲ್‌ ನನ್ನು ಇಂದು ನಸುಕಿನ ವೇಳೆ ಬಂಧಿಸಲಾಗಿದ್ದು ಆತನನ್ನು  ಪ್ರಶ್ನಿಸಿದ ಬಳಿಕ ಇಂದು ಸಂಜೆಯ ವೇಳೆಗೆ ಕೋರ್ಟಿನಲ್ಲಿ  ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ (ಬುಲಂದ್‌ಶಹರ್‌ ನಗರ) ಅತುಲ್‌ ಕುಮಾರ್‌ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا