Urdu   /   English   /   Nawayathi

ವಿಧಾನಸೌಧ ಬಳಿ ಸಿಕ್ಕ 25.76 ಲಕ್ಷ ಹಣ 4 ಗುತ್ತಿಗೆದಾರರಿಂದ ಸಂಗ್ರಹಿಸಲಾಗಿದೆ: ಪೊಲೀಸರು

share with us

ಬೆಂಗಳೂರು: 09 ಜನುವರಿ (ಫಿಕ್ರೋಖಬರ್ ಸುದ್ದಿ) ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್‌ ಕುಮಾರ್ ಬಳಿ ಪತ್ತೆಯಾದ 25.76 ಲಕ್ಷ ರುಪಾಯಿ ಹಣವನ್ನು ನಾಲ್ವರು ಗುತ್ತಿಗೆದಾರರಿಂದ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಚಿವರ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಹಾಗೂ ಸಚಿವರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೈ,ಸೂರು ಮೂಲದ ಮೋಹನ್ ಬಳಿ ಜನವರಿ 4ರಂದು  25.76 ಲಕ್ಷ ನಗದು ಪತ್ತೆಯಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ, ಮೋಹನ್ ಅವರು ಜನವರಿ 3ರಂದು ಗುತ್ತಿಗೆದಾರನ ಪರವಾಗಿ ಅನಂತು ಎಂಬಾತನಿಂದ 3.60 ಲಕ್ಷ ಹಣವನ್ನು ವಿಧಾನಸೌಧ ಮುಂಭಾಗ ಕಾರಿಡಾರ್ ನಲ್ಲಿ ಕೊಟ್ಟಿದ್ದ. ಮರುದಿನ ಜನವರಿ 4ರಂದು ಬೆಳಗ್ಗೆ ನಂದ ಎಂಬಾತನಿಂದ 15,9 ಲಕ್ಷ ಕೋಟು ಹೋಗಿದ್ದ. ಅದೇ ದಿನ ನನ್ನ ಸ್ನೇಹಿತ  ಮಂಜು ಎಂಬಾತ ತನ್ನ ಸಂಬಂಧಿ ಶ್ರೀನಿಧಿ ಕಡೆಯಿಂದ ಹೈಕೋರ್ಟ್ ಮುಂಭಾಗ 2 ಲಕ್ಷ ರುಪಾಯಿ ಕೊಡಿಸಿದ್ದ. ಅಲ್ಲದೆ ಕೃಷ್ಣಮೂರ್ತಿ ಎಂಬಾತ 4.26 ಲಕ್ಷ ರುಪಾಯಿ ಕೊಟ್ಟಿದ್ದ. ಆ ಹಣವನ್ನೆಲ್ಲ ಕಚೇರಿಗೆ ತೆಗೆದುಕೊಂಡು ಬಂದಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಮೋಹನ್ ಬಳಿ ಪತ್ತೆಯಾಗಿರುವ ಹಣ ಲಂಚದ ಹಣ ಇರಬಹುದು ಎನ್ನುವ ಅನುಮಾನದ ಮೇರೆಗೆ ಪ್ರಕರಣ ಎಸಿಬಿಗೆ ವರ್ಗಾಯಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪುಟ್ಟರಂಗಶೆಟ್ಟಿ ಅವರು, ಪತ್ತೆಯಾದ ಹಣಕ್ಕು ತಮಗೂ ಯಾವುದೇ ಸಂಬಂಧ ಇಲ್ಲ. ಹಣ ಪತ್ತೆಯಾದ ವೇಳೆ ತಾವು ಬೆಂಗಳೂರಿನಲ್ಲೇ ಇರಲಿಲ್ಲ ಎಂದಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا