Urdu   /   English   /   Nawayathi

ನಾಯಿಗೆ ಕಲ್ಲಿಂದ ಹೊಡೆದ ಯುವಕನನ್ನು ಗುಂಡಿಟ್ಟು ಕೊಂದ ಮಾಲೀಕ!

share with us

ನವದೆಹಲಿ: 07 ಜನುವರಿ (ಫಿಕ್ರೋಖಬರ್ ಸುದ್ದಿ) ತನ್ನ ಪ್ರೀತಿಯ ನಾಯಿಗೆ ಕಲ್ಲಿನಿಂದ ಹೊಡೆದ ಎಂಬ ಆಕ್ರೋಶಕ್ಕೆ 30 ವರ್ಷದ ಯುವಕನನ್ನು ಗುಂಡು ಹೊಡೆದು ಸಾಯಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.  ಪೊಲೀಸ್ ಅಧಿಕಾರಿ ಅತುಲ್ ಠಾಕೂರ್ ಹೇಳಿಕೆ ಪ್ರಕಾರ,ಅಶ್ಪಾಕ್(30ವರ್ಷ) ಎಂಬ ಯುವಕ ದೆಹಲಿಯ ಈಶಾನ್ಯ ಪ್ರದೇಶದ ವೆಲ್ ಕಂ ಕಾಲೋನಿಯ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ನಾಯಿ ಬೊಗಳಲು ಆರಂಭಿಸಿತ್ತು. ಅಷ್ಟೇ ಅಲ್ಲ ಅಶ್ಫಾಕ್ ನಿಗೆ ಕಚ್ಚಲು ಯತ್ನಿಸಿತ್ತು, ಈ ವೇಳೆ ಆತ ಕಲ್ಲಿನಿಂದ ಹೊಡೆದು ನಾಯಿಯನ್ನು ಓಡಿಸಿದ್ದ. ತನ್ನ ಪ್ರೀತಿಯ ನಾಯಿಗೆ ಕಲ್ಲಿನಿಂದ ಹೊಡೆದಿರುವುದನ್ನು ಗಮನಿಸಿದ ಮಾಲೀಕ ಮೆಹತಾಬ್, ಮನೆಯೊಳಗೆ ಹೋಗಿ ಪಿಸ್ತೂಲ್ ಅನ್ನು ತೆಗೆದುಕೊಂಡು ಬಂದು, ಅಶ್ಫಾಕ್ ಬಳಿ ನಾಯಿಗೆ ಕಲ್ಲು ಹೊಡೆದಿದ್ದೇಕೆ ಎಂದು ಕ್ಯಾತೆ ತೆಗೆದು ಜಗಳಕ್ಕಿಳಿದುಬಿಟ್ಟಿದ್ದ. ಈ ವೇಳೆ ಆತನಿಗೆ ಗುಂಡು ಹೊಡೆದು ಬಿಟ್ಟಿದ್ದ ಎಂದು ಠಾಕೂರ್ ವಿವರಿಸಿದ್ದಾರೆ.

ಕೂಡಲೇ ಕುಸಿದುಬಿದ್ದ ಅಶ್ಫಾಕ್ ನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಅಶ್ಫಾಕ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا