Urdu   /   English   /   Nawayathi

ಹಾಡಹಗಲೇ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಆರೋಪಿ ಅರೆಸ್ಟ್

share with us

ಲಕ್ನೋ: 03 ಜನುವರಿ (ಫಿಕ್ರೋಖಬರ್ ಸುದ್ದಿ) ಕಳೆದ ತಿಂಗಳು ಉತ್ತರಪ್ರದೇಶದ ಬುಲಂದ್ ಶಹರ್‍ನಲ್ಲಿ ಸಂಭವಿಸಿದ ಗುಂಪು ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಯೋಗೇಶ್ ರಾಜ್ ಬಂಧಿತ ಆರೋಪಿ. ದೇಶವನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲೇ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಯಾದ ಬಳಿಕ ಯೋಗೇಶ್ ರಾಜ್ ರಹಸ್ಯ ಸ್ಥಳದಲ್ಲಿ ಕುಳಿತುಕೊಂಡು ವಿಡಿಯೋವನ್ನು ರವಾನಿಸಿದ್ದ. ಅರಣ್ಯದಲ್ಲಿ ಹಸುಗಳ ಕಳೇಬರ ಪತ್ತೆಯಾದ ಬಳಿಕ ಡಿ.3 ರಂದು ಸ್ಥಳೀಯರನ್ನು ಗುಂಪು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಯೋಗೇಶ್ ವಿರುದ್ಧವಿದೆ. ಹಿಂಸಾಚಾರಕ್ಕೆ ಮೊದಲೇ ಈತ ಗೋಹತ್ಯೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು,10 ಆರೋಪಿಗಳನ್ನು ಹೆಸರಿಸಿದ್ದ. ಸುಮಾರು 400ರಷ್ಟಿದ್ದ ಜನರ ಗುಂಪು ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್‍ರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಲ್ಲದೆ, ಕಲ್ಲು ಹಾಗೂ ಕೈಗೆ ಸಿಕ್ಕಿದ ವಸ್ತುಗಳಿಂದ ಹಲ್ಲೆ ನಡೆಸಿತ್ತು.

ಬಳಿಕ ಅವರ ಕಾರನ್ನು ಚೇಸಿಂಗ್ ಮಾಡಿ ಹತ್ಯೆಗೈಯ್ಯಲಾಗಿತ್ತು. ಹಿಂಸಾಚಾರಕ್ಕೆ 20ರ ಹರೆಯದ ಸ್ಥಳೀಯ ವ್ಯಕ್ತಿ ಸಾವನ್ನಪ್ಪಿದ್ದಾನೆ. ಒಂದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಯೋಗೇಶ್ ರಾಜ್‍ನನ್ನು ಇದೀಗ ಬಜರಂಗ ದಳದ ಮುಖಂಡರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا