Urdu   /   English   /   Nawayathi

ದುಸ್ಸಾಹಸ ಮಾಡಲು ಹೋಗಿ ಸಾವನ್ನೇ ಮೈಮೇಲೆ ಎಳೆದುಕೊಂಡ ವಿದ್ಯಾರ್ಥಿ: ಲೈವ್​ ವಿಡಿಯೋ

share with us

ನವದೆಹಲಿ: ಸೋಶಿಯಲ್​ ಮೀಡಿಯಾದಲ್ಲಿ ಹೀರೋಗಳಾಗಬೇಕೆಂದು ಯುವಕರು ಹುಚ್ಚು ಸಾಹಸಗಳನ್ನು ಮಾಡುತ್ತಲೆ ಇದ್ದಾರೆ. ಇಲ್ಲೊಬ್ಬ ವಿದ್ಯಾರ್ಥಿ ಹಗ್ಗದ ಸಹಾಯವಿಲ್ಲದೆ ಬೆಟ್ಟ ಹತ್ತಲು ಹೋಗಿ, ಕೈಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಲೈವ್ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಜೆಎನ್​ಯು ವಿದ್ಯಾರ್ಥಿ ಪ್ರವೀಣ್ ತಿವಾರಿ (30) ದುಸ್ಸಾಹಸ ಮಾಡಲು ಹೋಗಿ, ಪ್ರಾಣ ಕಳೆದುಕೊಂಡ ದುರ್ದೈವಿ. ಜಬಲ್​ಪುರ ಮೂಲದ ಪ್ರವೀಣ್​ ಜೆಎನ್​ಯುನ ಬ್ರಹ್ಮಪುತ್ರ ಹಾಸ್ಟೆಲ್​ನಲ್ಲಿ ವಾಸವಿದ್ದ. ವಿವಿಯ ಐಸಿಎಸ್​ಎಸ್​ಆರ್​ನಲ್ಲಿ ರೀಸರ್ಚ್​ ಅಸಿಸ್ಟೆಂಟ್​ ಆಗಿಯೂ ಕೆಲಸ ಮಾಡುತ್ತಿದ್ದ. ವಿವಿ ಆವರಣದಲ್ಲೇ ಇರುವ ಬೆಟ್ಟವನ್ನು ಯಾವುದರ ಸಹಾಯವಿಲ್ಲದೇ ಹತ್ತಲು ಮುಂದಾಗಿದ್ದನು. ಇದನ್ನು  ಸ್ನೇಹಿತರು ವಿಡಿಯೋ ಮಾಡುತ್ತಿದ್ದರು. ಒಂದಷ್ಟು ಎತ್ತರ ತಲುಪಿದ ನಂತರ ಪ್ರವೀಣ್ ಮತ್ತಷ್ಟು ಮೇಲಕ್ಕೇರಲು ಯತ್ನಿಸಿದ್ದನು. ಈ ವೇಳೆ ಆತನ ಕೈಜಾರಿ ಕೆಳಗೆಬಿದ್ದು ಪ್ರಾಣ ಬಿಟ್ಟಿದ್ದಾನೆ.  ಈ ದೃಶ್ಯಗಳು ಸ್ನೇಹಿತರ ಕ್ಯಾಮೆರಾದಲ್ಲಿ ಸೆರೆಯಾಗಿವೆ. 

ಪ್ರಕರಣ ತನಿಖೆ ನಡೆಸಿದ ಪೊಲೀಸರು,  ರೋಪ್​ ಇಲ್ಲದೆ  ಬೆಟ್ಟ ಏರಲು ಮುಂದಾಗಿದ್ದೇ  ವಿದ್ಯಾರ್ಥಿ ಸಾವಿಗೆ  ಕಾರಣ ಎಂದು ದೃಢಪಡಿಸಿದ್ದಾರೆ. ವಿದ್ಯಾರ್ಥಿಯ ಶವಪರೀಕ್ಷೆ ನಡೆದ ನಂತರ ಆತನ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. 

https://youtu.be/PRuZJ6kt6Xk

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا