Urdu   /   English   /   Nawayathi

ಗ್ರಾಮಸ್ಥರ ಮೇಲೆ ಚಿರತೆ ದಾಳಿ : ಅನೇಕರಿಗೆ ಗಾಯ

share with us

ಕೃಷ್ಣಗಿರಿ: 29 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಗ್ರಾಮಸ್ಥರ ಗುಂಪಿನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ಅನೇಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವನ್ನಂಬಾಡಿ ಕೆರೆ ಏರಿ ಮೇಲೆ ನಡೆದಿದೆ. ಅರಣ್ಯದಿಂದ ಆಹಾರ ಅರಸಿ ವನ್ನಂಬಾಡಿ ಕೆರೆ ಬಳಿ ಬಂದಿದ್ದ ಚಿರತೆಯನ್ನು ನೋಡಲು ಅನೇಕ ಗ್ರಾಮಸ್ಥರು ಕೆರೆ ಮೇಲೆ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಕೆಲವು ಕಿಡಗೇಡಿಗಳು ಕಲ್ಲುಗಳನ್ನು ಎಸೆದು ಕೀಟಲೆ ಮಾಡಿದಾಗ ರೊಚ್ಚಿಗೆದ್ದ ಚಿರತೆ ಗ್ರಾಮಸ್ಥರ ಮೇಲೆ ಎರಗಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಓಡಿದರು. ಆದರೂ ಈ ವನ್ಯಜೀವಿ ಕೆಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತು. ಚಿರತೆಯ ರೋಷಾವೇಷ ಕಂಡು ಓಡುತ್ತಿದ್ದ ಕೆಲವರು ಕೆಳಗೆ ಬಿದ್ದು ಗಾಯಗೊಂಡರು.

ಈ ಎಲ್ಲ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಷ್ಟು ಜನರನ್ನು ಏಕಾಂಗಿ ಚಿರತೆ ಬೆದರಿಸಿ ಬೆನ್ನಟ್ಟಿದ ಮತ್ತು ದಾಳಿ ನಡೆಸಿದ ದೃಶ್ಯಗಳು ಮೊಬೈಲ್ ಫೋನ್‍ಗಳಲ್ಲಿ ಹರಿದಾಡುತ್ತಿವೆ.

https://youtu.be/azeEVl7Bngw

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا