Urdu   /   English   /   Nawayathi

ಚಿಕ್ಕಮಗಳೂರು: ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ ಪೋಲೀಸರಿಗೆ ಶರಣು!

share with us

ಚಿಕ್ಕಮಗಳೂರು: 25 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಕಡೂರು ತಾಲೂಕಿನ ಕಂಚಿಗೂರು ನಿವಾಸಿ ಬಸಪ್ಪ(63) ಎಂಬಾತನೇ ತನ್ನ ಪತ್ನಿಯನ್ನು ಹತ್ಯೆಗೈದು ಪೋಲೀಸರಿಗೆ ಶರಣಾದ ಆರೋಪಿ. ಈತ ನಿವೃತ್ತ ಶಿಕ್ಷಕನಾಗಿದ್ದನೆನ್ನಲಾಗಿದೆ. ಈತ ತನ್ನ ಪತ್ನಿ ಜಯಮ್ಮ (53)ಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಪರವಾನಗಿ ಇಲ್ಲದ ಬಂದೂಕಿನಿಂದ ಐದು ಗುಂಡುಗಳನ್ನು ಹಾರಿಸಿ ಆತ ಪತ್ನಿಯನ್ನು ಹತ್ಯೆ ಮಾಡಿದ್ದನು.

ಹಲವು ವರ್ಷಗಳಿಂದಲೂ ಪತಿ-ಪತ್ನಿಯರ ನಡುವೆ ಮನಸ್ತಾಪವಿತ್ತು, ಆದರೆ ಹೇಗೋ ಅವರು ಒಟ್ಟಾಗಿಯೇ ಸಂಸಾರ ನಡೆಸುತ್ತಿದ್ದರು.ಆದರೆ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾಗಿದ್ದ ಜಗಳ ಮುಗಿಯದೇ ಹೋಗಿದ್ದು ಜಯಮ್ಮ ಸ್ನಾನ ಮುಗಿಸಿ ಬರುತ್ತಿದ್ದಂತೆಯೇ ಬಸಪ್ಪ ಏಕಾಏಕಿ ಅವಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ತಾನೇ ಠಾಣೆಗೆ ತೆರಳಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಸಖರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا