Urdu   /   English   /   Nawayathi

ಪಂಜಾಬ್ ರಾಜ್ಯದ ಕ್ಯಾಪ್ಟನ್ ನಮ್ಮ ಕ್ಯಾಪ್ಟನ್; ಸಿಎಂ ಬಳಿ ಕ್ಷಮೆಯಾಚಿಸಿ- ಸಿಧುಗೆ ಕಾಂಗ್ರೆಸ್ ಸಂಸದ

share with us

ಲುಧಿಯಾನ: 03 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಪಂಜಾಬ್ ರಾಜ್ಯದ ಕ್ಯಾಪ್ಟನ್ ನಮ್ಮ ಕ್ಯಾಪ್ಟನ್. ಅಸಂಬದ್ಧ ಹೇಳಿಕೆ ನೀಡಿದ್ದ ಸಚಿವ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಬಳಿ ಕೂಡಲೇ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಸಂಸದ ರವ್ನೀತ್ ಸಿಂಗ್ ಬಿಟ್ಟು ಅವರು ಆಗ್ರಹಿಸಿದ್ದಾರೆ. ಲುಧಿಯಾನದಲ್ಲಿರುವ ಪ್ರತೀಯೊಂದು ಬೀದಿಯಲ್ಲಿರುವ ಪೋಸ್ಟರ್ ಗಳಲ್ಲಿ ಪಂಜಾಬ್ ಕ್ಯಾಪ್ಟನ್ ನಮ್ಮ ಕ್ಯಾಪ್ಟನ್ ಎಂದು ರಾರಾಜಿಸುತ್ತಿವೆ. ಇದು ಜನರ ನಂಬಿಕೆ ಹಾಗೂ ಭಾವನೆಗಳಿಗೆ ಸಂಬಂಧಿಸಿದ್ದು. ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಗಳನ್ನು ತಮ್ಮ ತಂದೆಯೆಂದು ಪರಿಗಣಿಸುವುದೇ ಆದರೆ, ತಮ್ಮ ಹೇಳಿಕೆ ಕುರಿತಂತೆ ಕೂಡಲೇ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ. 

ಮುಖ್ಯಮಂತ್ರಿಗಳ ವಿರೋಧವಿದ್ದರೂ ಪಾಕಿಸ್ತಾನಕ್ಕೆ ಹೋಗಿದ್ದಕ್ಕೆ ಕಾರಣ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ನವಜೋತ್ ಸಿಧು ಅವರು, ಅಮರೀಂದರ್ ಸಿಂಗ್ ವಿರುದ್ಧ ಕಿಡಿಕಾರಿದ್ದರು. ಹೈದರಾಬಾದ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿಧು, ನನ್ನ ಕ್ಯಾಪ್ಟನ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ರಾಹುಲ್ ಅವರೇ ನನ್ನನ್ನು ಪಾಕಿಸ್ತಾನಕ್ಕೆ ತೆರಳಲು ಆದೇಶಿಸಿದ್ದರು. ರಾಹುಲ್ ಗಾಂಧಿಯವರು ಪಂಜಾಬ್ ಮುಖ್ಯಮಂತ್ರಿಗಳೂ ಕ್ಯಾಪ್ಟೆನ್ ಎಂದು ಹೇಳಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا