Urdu   /   English   /   Nawayathi

ಅಮಿತ್ ಶಾ ಇಷ್ಟಪಡುತ್ತಾರೋ, ಇಲ್ಲವೋ ಗೊತ್ತಿಲ್ಲ, ಬಿರಿಯಾನಿ ಕಳುಹಿಸುವಂತೆ ಕೆಸಿಆರ್'ಗೆ ಹೇಳುತ್ತೇನೆ: ಓವೈಸಿ

share with us

ಹೈದರಾಬಾದ್: 29 ನವೆಂಬರ್ (ಫಿಕ್ರೋಖಬರ್ ಸುದ್ದಿ) ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಷ್ಟ ಪಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಬೇಕಿದ್ದರೆ, ಅಮಿತ್ ಶಾ ಅವರಿಗೆ ಬಿರಿಯಾನಿ ಕಳುಹಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುತ್ತೇನೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಮುಸ್ಲಿಮರಿಗೆ ಚಂದ್ರಶೇಖರ್ ರಾವ್ ಅವರು ಬಿರಿಯಾನಿ ನೀಡಿದ್ದರು. ಇದಕ್ಕೆ ಅಮಿತ್ ಶಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ವ್ಯಂಗ್ಯವಾಡಿರುವ ಓವೈಸಿಯವರು, ಬೇಕಿದ್ದರೆ, ಅಮಿತ್ ಶಾ ಅವರಿಗೆ ಬೀಫ್ ಬಿರಿಯಾನಿ ಕಳುಹಿಸರು ಕೆಸಿಆರ್ ಅವರಿಗೆ ಶಿಫಾರಸು ಮಾಡುತ್ತೇನೆಂದು ಹೇಳಿದ್ದಾರೆ. 

ಯಾರೋ ಬಿರಿಯಾನಿ ತಿಂದರೆ, ಅಮಿತ್ ಶಾಗೇಕೆ ಹೊಟ್ಟೆ ಕಿಚ್ಚು? ಶಾ ಅವರಿಗೂ ಬಿರಿಯಾನಿ ಇಷ್ಟ ಎಂದು ನನಗೆ ಗೊತ್ತಿರಲಿಲ್ಲ. ನಿಮಗೆ ಕೊಟ್ಟಿಲ್ಲವೆಂದು ಬೇಸರವಿದ್ದರೆ, ನಿಮಗೂ ಬೀಫ್ ಬಿರಿಯಾನಿ ಕಳುಹಿಸಿಕೊಡುತ್ತೇವೆ, ನೀವೂ ತಿನ್ನಿ ಎಂದು ತಿಳಿಸಿದ್ದಾರೆ. ಇದೇ ವೇಳೆ ಮೋದಿಯವರಿಗೆ ಟಾಂಗ್ ನೀಡಿರುವ ಓವೈಸಿ, ಆಹ್ವಾನವೇ ಇಲ್ಲದಿದ್ದರು ಮೋದಿ ಪಾಕಿಸ್ತಾನಕ್ಕೆ ತೆರಳಿ, ಷರೀಫ್ ಅವರ ಮಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರಿಗೆ ತಿನ್ನಲು ಏನು ಕೊಟ್ಟರು? ಅಲ್ಲಿ ಮೋದಿಯವರಿಗೆ ಎಂತಹ ಆಹಾರ ಕೊಟ್ಟಿದ್ದರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا