Urdu   /   English   /   Nawayathi

ಬಸ್ಸಿನ ಕೆಳಗೆ ಸಿಲುಕಿ ವ್ಯಕ್ತಿಯ ಸಾವು

share with us

ಮಂಗಳೂರು: 28 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮಂಗಳೂರು ನಗರದ ಕೂಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸು ತಿರುವಿನಲ್ಲಿ ತಿರುಗುವ ವೇಳೆ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತಪಟ್ಟ ವ್ಯಕ್ತಿ ಕೂಳೂರು ಚರ್ಚ್ ಹತ್ತಿರದ ನಿವಾಸಿ ಭೋಜ(52) ಎಂದು ಹೇಳಲಾಗಿದೆ. ಮೃತಪಟ್ಟ ವ್ಯಕ್ತಿ ಎಲೆಕ್ಟ್ರಿಷನ್ ಕೆಲಸ ಮಾಡುತ್ತಿದ್ದು, ಮಂಗಳವಾರದಂದು ರಾತ್ರಿ ಕೆಲಸ ಮುಗಿಸಿ ಬಸ್ಸಿನಿಂದ ಇಳಿದು ಮನೆಗೆ ಹೋಗವು ವೇಳೆ ತಿರುವಿನಲ್ಲಿ ತಿರುಗಿಸುತ್ತಿದ್ದ ಶಬರಿ ಬಸ್ ಈತನಿಗೆ ಡಿಕ್ಕಿ ಹೊಡೆದ ಪರಿಣಾಮ ಭೋಜ ಬಸ್ಸಿನ ಕೆಳಗೆ ಸಿಲುಕಿ, ಆತನ ಮೈ ಮೇಲೆ ಟೈರ್ ಹತ್ತಿ ಸ್ಥಳದಲ್ಲೇ ಮರಣಹೊಂದಿದ್ದಾನೆ ಎಂದು ಹೇಳಲಾಗಿದೆ. ಪ್ರಕರಣ ಕಾವೂರು ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا