Urdu   /   English   /   Nawayathi

Satish Jarkiholi: ವಿಧಾನಸಭೆ ಚುನಾವಣೆಗೆ 1 ಕೋಟಿ ರೂ. ಖರ್ಚು ಮಾಡಿದ್ದರಂತೆ ಸತೀಶ್‌ ಜಾರಕಿಹೊಳಿ!

share with us

ಹರಿಹರ: 26 ನವೆಂಬರ್ (ಫಿಕ್ರೋಖಬರ್ ಸುದ್ದಿ) 'ವಿಧಾನಸಭೆ ಚುನಾವಣೆಯಲ್ಲಿ ಒಂದು ಕೋಟಿ ರೂ. ಖರ್ಚು ಮಾಡಿದ್ದೇನೆ' ಎಂದು ಶಾಸಕ ಸತೀಶ್‌ ಜಾರಕಿಹೊಳಿಬಹಿರಂಗಗೊಳಿಸಿದ್ದಾರೆ. ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಶ್ರೀವಾಲ್ಮೀಕಿ ಮಹೋತ್ಸವದ ಸಿದ್ಧತಾ ಸಭೆಯಲ್ಲಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ದೇಣಿಗೆ ಪಡೆಯುವ ವಿಷಯ ಪ್ರಸ್ತಾಪಿಸಿದಾಗ ಈ ವಿಷಯವನ್ನು ಸತೀಶ್‌ ಜಾರಕಿಹೊಳಿ ಹೇಳಿದರು. ಶ್ರೀ ಪ್ರಸನ್ನಾನಂದ ಸ್ವಾಮೀಜಿ,'ಶ್ರೀ ವಾಲ್ಮೀಕಿ ಮಹೋತ್ಸವವನ್ನು ತರಳಬಾಳು, ಶರಣ ಸಂಸ್ಕೃತಿ ಉತ್ಸವದಂತೆ ಫೆ.8 ಮತ್ತು 9ರಂದು ರಾಜನಹಳ್ಳಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು' ಎಂದು ಹೇಳಿದರು. 

ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾಧು, ಸಮಾಜದ ಮುಖಂಡರಾದ ಶಾಂತಲಾ ರಾಜಣ್ಣ, ರಂಗರಾಜು ವನದುರ್ಗ, ಪಿ.ಈಶ್ವರ್‌, ಹರ್ತಿಕೋಟೆ ವೀರೇಂದ್ರ ಸಿಂಹ, ಚಿಕ್ಕಮಗಳೂರು ಭೀಮಪ್ಪ, ಹಾಸನ ಮಹಾಂತಪ್ಪ, ಕೊಪ್ಪಳ ಟಿ.ರತ್ನಾಕರ, ಮೈಸೂರು ದ್ಯಾವಪ್ಪ ನಾಯಕ, ಬೆಂಗಳೂರು ನಾಗರಾಜ್‌, ತುಮಕೂರು ಪ್ರತಾಪ್‌ ಮದಕರಿ ಇತರರಿದ್ದರು. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا