Urdu   /   English   /   Nawayathi

ರೈಲು ಬಡಿದು ವ್ಯಕ್ತಿಯ ಸಾವು

share with us

ಭಟ್ಕಳ: 21 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮಂಗಳವಾರದಂದು ಮಧ್ಯಾಹ್ನ ಭಟ್ಕಳ ತಾಲೂಕಿನ ಗಡಿಪ್ರದೇಶದ ಬೈಂದೂರು ತಾಲೂಕು ಶಿರೂರ್ ಬಪ್ಪನಬಿಳ್ಳುವಿನ ಬಳಿ ಹಳಿ ದಾಟುತ್ತಿದ್ದ ವೃದ್ಧ ವ್ಯಕ್ತಿಗೆ ರೈಲು ಬಡಿದು ವ್ಯಕ್ತಿ ಸ್ಥಳದಲ್ಲೇ ಮರಣಹೊಂದಿದ್ದಾರೆ. ಮರಣಹೊಂದ ವೃದ್ಧ ಶಿರೂರು ಬಪ್ಪನಬಿಳ್ಳುವಿನ ನಿವಾಸಿ ಹಿರಿಯಾ ಅಣ್ಣಪ್ಪ ನಾಯ್ಕ್ ಎಂದು ತಿಳಿದು ಬಂದಿದೆ. ಇವರು ತಮ್ಮ ಮನೆಯ ಕಡೆಗೆ ರೈಲು ಹಳಿಯನ್ನು ದಾಟಿ ನಡೆದುಕೊಂಡು ಹೋಗುವಾಗ ರೈಲು ಬಡಿದು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ ಅಣ್ಣಪ್ಪ ನಾಯ್ಕ್ ಅವರಿಗೆ ಕಿವಿ ಸರಿಯಾಗಿ ಕೇಳದ ಕಾರಣ ರೈಲು ಸಂಚಾರವನ್ನು ಗ್ರಹಿಸದೇ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪ್ರಕರಣ ಬೈಂದೂರಿನ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا