Urdu   /   English   /   Nawayathi

ಹೊನ್ನಾವರದ ಶರಾವತಿ ನದಿಯಲ್ಲಿ ಮೀನುಗಾರರ ಶವ ಪತ್ತೆ

share with us

ಹೊನ್ನಾವರ: 18 ನವೆಂಬರ್ (ಫಿಕ್ರೋಖಬರ್ ಸುದ್ದಿ) ಹೊನ್ನಾವರ ತಾಲೂಕಿನ ಇಡಗುಂಜಿಯ ಬಳಿ ಇರುವ ಶರಾವತಿ ನದಿಯಲ್ಲಿ ಮೀನುಗಾರಿಕೆಗೆಂದು ತೆರಳಿದ ಮೀನುಗಾರರಿಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರು ಇಡಗುಂಜಿಯ ಬಸವನ ಹಿತ್ತಲಿನ ನಿವಾಸಿಗಳಾದ ಗಣಪತಿ ಅಂಬಿಗ ಹಾಗೂ ಪರಮೇಶ್ವರ ಅಂಬಿಗ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಇಬ್ಬರೂ ಶರಾವತಿ ನದಿಯಲ್ಲಿ ಮೀನುಗಾರಿಕೆಗೆಂದು ತೆರಳಿದ್ದು, ಬುಧವಾರ ರಾತ್ರಿಯಾದರೂ ಮನೆಗೆ ಬರದ ಕಾರಣ ಕುಟುಂಬದವರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೋಲೀಸರು ಕಾಣೆಯಾದವರಿಗಾಗಿ ಶೋಧನೆ ನಡೆಸಿದರು. ಯಾವುದೇ ಸುಳಿವು ಕೈ ತಗುಲದ ಕಾರಣ, ಶುಕ್ರವಾರದಂದು ಬೆಳಿಗ್ಗೆ ಈಜುಪಟುಗಳ ನೆರವಿನಿಂದ ನೀರಿನಲ್ಲಿ ಶೋಧಿಸಿದಾಗ ಎರಡು ಶವ ಪತ್ತೆಯಾಗಿದೆ ಎನ್ನಲಾಗಿದೆ. ಮೀನುಗಾರಿಕೆಯ ವೇಳೆ ಬಹುಶಃ ದೋಣಿ ಮುಗುಚಿ ಇವರು ಸಾವನ್ನೊಪ್ಪಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ಮಂಕಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا