Urdu   /   English   /   Nawayathi

ಕುಮಟಾ ಉಪ ನೋಂದಣಾಧಿಕಾರಿ ಕಚೇರಿಗೆ ಏಕಾಏಕಿ ಎ,ಸಿ,ಬಿಯವರ ದಾಳಿ

share with us

ಕುಮಟಾ: 17 ನವೆಂಬರ್ (ಫಿಕ್ರೋಖಬರ್ ಸುದ್ದಿ) ಕುಮಟಾದಲ್ಲಿರುವ ವಿವಾಹ ನೋಂದಣಿ ಮತ್ತು ಉಪ ನೋಂದಣಿ ಕಚೇರಿಯಲ್ಲಿ ಎ,ಸಿ,ಬಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಕಚೀರಿಯ ಉಪ ನೋಂದಣಾಧಿಕಾರಿಯಾದ ಶಿವಾನಂಧ ಎಸ್, ಪಾಟೀಲ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವರದಿಗಳ ಪ್ರಕಾರ ಎ,ಸಿ,ಬಿ ಅಧಿಕಾರಿಗಳಿಗೆ ಕುಮಟಾ ಉಪ ನೋಂದಣಾಧಿಕಾರಿಯ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರು ದೊರಕಿದ ಕಾರಣ ಏಕಾಏಕಿ ದಾಳಿ ನಡೆಸಿ ಕಚೇರಿಯ ಕಾಗದ ಪತ್ರಗಳನ್ನು ಪರಿಶೀಲಿಸಿದಾಗ ನಿಜಾಂಶ ತಿಳಿದು ಬಂದಿದೆ ಎನ್ನಲಾಗಿದೆ. ಸರಕಾರಕ್ಕೆ ಸಮುದಾಯವಾಗುವ ಶುಲ್ಕದ ಹೊರತು ಸುಮಾರು 36,000 ರೂಪಾಯಿ ಕಚೇರಿಯಲ್ಲಿ ದೊರಕಿದ ಕಾರಣ ಎ,ಸಿ,ಬಿಯವರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ದಾಳಿಯ ವೇಳೆ ಕಚೇರಿಯಲ್ಲಿದ್ದ ಸಬ್ ರಿಜಿಸ್ಟ್ರಾರ್, ಕಂಪ್ಯೂಟರ್ ಆಪರೇಟರ್ ಅವರ ಬಳಿ ಸೇರಿ ಒಟ್ಟು 36,000 ರೂಪಾಯಿ ದೊರಕಿದ್ದು ಈ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا