Urdu   /   English   /   Nawayathi

ಟ್ರಯಂಫ್ ಕ್ಷಿಪಣಿಯಿಂದ ಭಾರತಕ್ಕೆ ರಕ್ಷಣೆ: ಏರ್‌ ಮಾರ್ಶಲ್‌ ನಂಬಿಯಾರ್‌

share with us

ಶಿಲ್ಲಾಂಗ್‌: 17 ನವೆಂಬರ್ (ಫಿಕ್ರೋಖಬರ್ ಸುದ್ದಿ) ರಶ್ಯದಿಂದ ಪಡೆಯಲಾಗಿರುವ ಎಸ್‌ 400 ಟ್ರಯಂಫ್ ಭೂರಕ್ಷಣಾ ಕ್ಷಿಪಣಿಯು "ಭೌಗೋಳಿಕ ಮಹತ್ವಾಕಾಂಕ್ಷೆ' ಹೊಂದಿರುವ ನೆರೆಯ ದೇಶದ ವಿರುದ್ದ ಭಾರತಕ್ಕೆ ಅಗತ್ಯವಿರುವ ಭದ್ರತೆಯನ್ನು ಒದಗಿಸುತ್ತದೆ ಎಂದು ಏರ್‌ ಮಾರ್ಶಲ್‌ ಆರ್‌ ನಂಬಿಯಾರ್‌ ಹೇಳಿದ್ದಾರೆ.

ಎಸ್‌ 400 ಟ್ರಯಂಫ್ ಕ್ಷಿಪಣಿಯು ಮುಂದಿನ ತಲೆಮಾರಿನ ಮೊಬೈಲ್‌ ಭೂಕ್ಷಣಾ ವ್ಯವಸ್ಥೆಯಾಗಿದ್ದು ಶತ್ರು ಸೇನೆಯ ವಾಯು ಗುರಿಯನ್ನು 400 ಕಿ.ಮೀ.ವ್ಯಾಪ್ತಿಯೊಳಗೆ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಈಸ್ಟರ್ನ್ ಏರ್‌ ಕಮಾಂಡ್‌ ನ ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಆಗಿರುವ ನಂಬಿಯಾರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ರಶ್ಯದಿಂದ ಖರೀದಿಸಲಾಗಿರುವ ಈ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯು ಮುಂದಿನ 23 ತಿಂಗಳೊಳಗೆ ಭಾರತದ ಕೈಸೆರುತ್ತದೆ ಎಂದು ಏರ್‌ ಮಾರ್ಶಲ್‌ ನಂಬಿಯಾರ್‌ ಹೇಳಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا