Urdu   /   English   /   Nawayathi

ಜಮ್ಮು ಕಾಶ್ಮೀರ : ಆಮ್ಲಜನಕ ಸಿಲಿಂಡರ್‌ ನ್ಪೋಟ; ಐವರಿಗೆ ಗಾಯ

share with us

ಬನಿಹಾಲ್‌, ಜಮ್ಮು ಕಾಶ್ಮೀರ: 15 ನವೆಂಬರ್ (ಫಿಕ್ರೋಖಬರ್ ಸುದ್ದಿ) ರಾಮಬನ ಜಿಲ್ಲೆಯಲ್ಲಿನ ಬಗಲೀಹಾರ್‌ ಜಲವಿದ್ಯುತ್‌ ಯೋಜನೆ ಘಟಕದ ಹೊರಭಾಗದಲ್ಲಿ ಟ್ರಕ್‌ ಒಂದರಿಂದ ಗ್ಯಾಸ್‌ ಸಿಲಿಂಡರ್‌ಗಳನ್ನು ಇಳಿಸುತ್ತಿದ್ದ ವೇಳೆ ಆಮ್ಲಜನಕದ ಸಿಲಿಂಡರೊಂದು ಸ್ಫೋಟಗೊಂಡ ಪರಿಣಾಮವಾಗಿ ಕನಿಷ್ಠ  ಐವರು ಗಾಯಗೊಂಡರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರ ಪೈಕಿ ಮೂವರು ಕಾರ್ಮಿಕರು, ಒಬ್ಟಾತ ಸೆಕ್ಯುರಿಟಿ ಗಾರ್ಡ್‌ ಮತ್ತು ಓರ್ವ ಅಧಿಕಾರಿ ಸೇರಿದ್ದಾರೆ. ಇವರನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು ಎಂದು ಜೆಪಿ ಅಸೋಸಿಯೇಟ್ಸ್‌ನ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ರಣದೀಪ್‌ ಸಿಂಗ್‌ ತಿಳಿಸಿದ್ದಾರೆ. 

ಗಾಯಾಳುಗಳನ್ನು ಪೊಲೀಸ್‌ ಅಧಿಕಾರಿಗಳು ಗುರುತಿಸಿದ್ದಾರೆ. ಅವರೆಂದರೆ ನಿರ್ವಹಣಾ ವಿಭಾಗದ ಅಧಿಕಾರಿ ಸತೀಶ್‌ ಶರ್ಮಾ, ಹಿಮಾಚಲ ಪ್ರದೇಶ, ಸೆಕ್ಯುರಿಟಿಗಾರ್ಡ್‌ ರವೀಂದರ್‌ ಸಿಂಗ್‌, ಪಂಜಾಬ್‌ ಮತ್ತು ಸ್ಥಳೀಯ ಕಾರ್ಮಿಕ ರವಿ ಕುಮಾರ್‌, ಮೋಹನ್‌ ಲಾಲ್‌ ಮತ್ತು ಫ‌ಕೀರ್‌ ಚಾಂದ್‌ ಎಂದು ತಿಳಿದು ಬಂದಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا