Urdu   /   English   /   Nawayathi

ಆಂಬಿಡೆಂಟ್ ಡೀಲ್ ಪ್ರಕರಣ: ರೆಡ್ಡಿಗೆ ಜಾಮೀನು

share with us

ಬೆಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಗಣಿಧಣಿ ಜನಾರ್ದನ ರೆಡ್ಡಿಗೆ ನ.14 ರಂದು ಜಾಮೀನು ದೊರೆತಿದೆ. 1 ಲಕ್ಷ ಬಾಂಡ್ ಇಬ್ಬರ ಶೂರಿಟಿ ನೀಡುವಂತೆ  1ನೇ ಸೆಷನ್ಸ್ ಕೋರ್ಟ್ ರೆಡ್ಡಿಗೆ ಸೂಚನೆ ನೀಡಿದ್ದು ಈ ಮೂಲಕ ಜನಾರ್ದನ ರೆಡ್ಡಿ 4 ದಿನಗಳ ಜೈಲು ವಾಸ ಅಂತ್ಯವಾದಂತಾಗಿದೆ. ಅಂಬಿಡೆಂಟ್ ಕಂಪನಿಯಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಅವ್ಯವಹಾರದ ಕುರಿತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ರದ್ದತಿಗಾಗಿ ಡೀಲ್ ನಡೆದಿದೆ ಎನ್ನುವ ಆರೋಪದ ಅಡಿಯಲ್ಲಿ ರೆಡ್ಡಿಯನ್ನು ಬಂಧಿಸಲಾಗಿತ್ತು. 

ಸಿಸಿಬಿ ಪೊಲೀಸ್ ರೆಡ್ಡಿಯನ್ನ ನವೆಂಬರ್ 11ರಂದು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಳಿಕ 1ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ರೆಡ್ಡಿಗೆ 14 ದಿನಗಳ ನ್ಯಾಯಾಂ ಬಂಧನ ವಿಧಿಸಿ ಆದೇಶ ನೀಡಿದ್ದರು. ಈಗ ಜಾಮೀನು ದೊರೆತಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا