Urdu   /   English   /   Nawayathi

ಲಂಕಾ ಸಂಸತ್ತಿನ ಸ್ಪೀಕರ್‌ಗೆ ಸಲಹೆ ನೀಡಲು ನಿರಾಕರಿಸಿದ ಅಟಾರ್ನಿ ಜನರಲ್

share with us

ಕೊಲಂಬೋ: 31 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ರಣಿಲ್‌ ವಿಕ್ರಮಸಿಂಘ ಅವರನ್ನು ಹುದ್ದೆಯಿಂದ ಕಿತ್ತು ಹಾಕಲಾದ ಕಾರಣಕ್ಕೆ ಉಂಟಾಗಿರುವ ಹಾಲಿ ರಾಜಕೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸಂಸತ್ತಿನ ಸ್ಪೀಕರ್‌ ಕರೂ ಜಯಸೂರ್ಯ ಅವರಿಗೆ ಯಾವುದೇ ಪರಿಣತ ಅಭಿಪ್ರಾಯ ನೀಡಲು ಲಂಕೆಯ ಅಟಾರ್ನಿ ಜನರಲ್‌ ಜಯಂತ ಜಯಸೂರ್ಯ ನಿರಾಕರಿಸಿದ್ದಾರೆ. 

ಈ ಸಂದರ್ಭದಲ್ಲಿ ತಾನು ಯಾವುದೇ ರೀತಿಯ ಪರಿಣತ ಅಭಿಪ್ರಾಯ ನೀಡುವುದು ಅನುಚಿತವಾಗುವುದೆಂದು ಅಟಾರ್ನಿ ಜನರಲ್‌ ಹೇಳಿದ್ದಾರೆ. ರಾಷ್ಟ್ರಾಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ವಿಕ್ರಮ ಸಿಂಘ ಅವರನ್ನು ವಜಾ ಮಾಡಿರುವುದೂ ಸೇರಿದಂತೆ ಸ್ಪೀಕರ್‌ ಅವರು ಕಾನೂನು ಸಿಂಧುತ್ವಕ್ಕೆ ಸಂಬಂಧಿಸಿ ಐದು ಪ್ರಶ್ನೆಗಳನ್ನು ಕೇಳಿದ್ದರು. 

"ಸಂವಿಧಾನದಡಿ ಅಟಾರ್ನಿ ಜನರಲ್‌ ಆಗಿ ಪಾತ್ರ ನಿರ್ವಹಿಸುತ್ತಿರುವ ನಾನು ಆ ಐದು ಪ್ರಶ್ನೆಗಳಿಗೆ ಪರಿಣತ ಉತ್ತರ ನೀಡುವುದು ಅನುಚಿತವಾಗುವುದು' ಎಂದು ಅಟಾರ್ನಿ ಜನರಲ್‌ ಸ್ಪೀಕರ್‌ಗೆ ಲಿಖೀತವಾಗಿ ತಿಳಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا