Urdu   /   English   /   Nawayathi

ಹಳಿ ಮೇಲೆ ಕುಳಿತಿದ್ದ ಮೂವರು ರೈಲಿಗೆ ಸಿಲುಕಿ ಛಿದ್ರ ಛಿದ್ರ

share with us

ನವದೆಹಲಿ: 29 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಹಳಿ ಮೇಲೆ ಕುಳಿತ್ತಿದ್ದ ಮೂವರು ವ್ಯಕ್ತಿಗಳಿಗೆ ರೈಲಿ ಡಿಕ್ಕಿ ಹೊಡೆದು ಅವರು ಛಿದ್ರಛಿದ್ರವಾಗಿರುವ ದಾರುಣ ಘಟನೆ ರಾಜಧಾನಿ ದೆಹಲಿಯ ನಾಂಗ್‍ಲೋಯಿ ರೈಲ್ವೆ ನಿಲ್ದಾಣದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.  ಮೃತಪಟ್ಟ ಮೂವರು ಬೆಳಗ್ಗೆಯೇ ಪಾನಮತ್ತರಾಗಿದ್ದರೆಂದು ಹೇಳಲಾಗಿದೆ. ಮದ್ಯಪಾನ ಮಾಡಿ ಬೆಳಗ್ಗೆ 7.15ರಲ್ಲಿ ಇವರು ರೈಲ್ವೆ ಹಳಿ ಮೇಲೆ ಕುಳಿತ್ತಿದ್ದರು.

ಇದೇ ಸಂದರ್ಭದಲ್ಲಿ ಬಿಕನೇರ್-ದೆಹಲಿ ಎಕ್ಸ್‍ಪ್ರೆಸ್ ರೈಲು ಇವರಿಗೆ ಡಿಕ್ಕಿ ಹೊಡೆಯಿತು. ಇವರು ಛಿದ್ರ ಛಿದ್ರವಾಗಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ಧಾರೆ. ಇವರು ಟ್ರ್ಯಾಕ್ ಮೇಲೆ ಕುಳಿತಿರುವುದನ್ನು ದೂರದಲ್ಲೇ ಗಮನಿಸಿದ ರೈಲ್ವೆ ಚಾಲಕ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದರೂ ಈ ಮೂವರು ಹಳಿಯಿಂದ ಕದಲಿಲ್ಲ. ರೈಲು ಅಪ್ಪಳಿಸಿದ ರಭಸಕ್ಕೆ ಅವರ ದೇಹಗಳು ನಜ್ಜುಗುಜ್ಜಾಗಿ ಛಿದ್ರವಾಗಿವೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

ವಿಜಯದಶಮಿ ದಿನದಂದು ಪಂಜಾಬ್‍ನ ಅಮೃತಸರ್‍ನಲ್ಲಿ ರಾವಣ ದಹನ ಆಚರಣೆಗಾಗಿ ರೈಲು ಹಳಿಗಳ ಮೇಲೆ ಜಮಾಹಿಸಿದ್ದ ಗುಂಪಿನ ಮೇಲೆ ರೈಲು ನುಗ್ಗಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟ ಭೀಕರ ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا