Urdu   /   English   /   Nawayathi

ವಿಜಯಪುರ: ಗಂಗಾಧರ ಚಡಚಣ ಹತ್ಯೆ ಆರೋಪಿ ಸಿಪಿಐ ಅಸೋಡೆ ಬಂಧನ

share with us

ವಿಜಯಪುರ: 20 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಆರೋಪಿಯಾಗಿದ್ದ ಪೋಲೀಸ್ ಇನ್ಸ್ ಪೆಕ್ಟರ್ ಅಸೋಡೆ ಅವರ ಬಂಧನವಾಗಿದೆ. ಪ್ರಕರಣದ ಹದಿಮೂರನೇ ಆರೋಪಿಯಾಗಿದ್ದ ಸಿಪಿಐ ಅಸೋಡೆ ತಲೆಮರೆಸಿಕೊಂಡಿದ್ದರು. ಇವರಿಗಾಗಿ ತೀವ್ರ ಶೋಧ ನಡೆಸಿದ್ದ ಸಿಐಡಿ ಪೋಲೀಸರು ಅಸೋಡೆಯವರನ್ನು ಕಳೆದ ರಾತ್ರಿ ಕೋಲ್ಕತ್ತಾದಲ್ಲಿ ಬಂಧಿಸಿದೆ.

ಚಡಚಣ ಸೋದರರಾದ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಸೋದರರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂ.ಬಿ. ಅಸೊದೆ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಿದ್ದು ಅವರನ್ನು ವಿಜಯಪುರಕ್ಕೆ ಕರೆದುಕೊಂಡು ಬರಲಾಗುತ್ತಿದೆ.

ಕಳೆದ ವರ್ಷ ಅಕ್ಟೋಬರ್ 30ರಂದು ಗಂಗಾಧರ ಚಡಚಣ ಪೋಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದರು. ಆದರೆ ಇದು "ನಕಲಿ ಎನ್ ಕೌಂಟರ್" ಎಂದು ಅವರ ತಾಯಿ ಆರೋಪಿಸಿದ್ದು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆ ನಡೆದ ವೇಳೆ ಪೋಲೀಸ್ ಅಧಿಕಾರಿಗಳ ಶಾಮೀಲಿನಿಂದ ಈ ನಕಲಿ ಎನ್ ಕೌಂಟರ್ ನಡೆದಿದೆ. ಅವರುಗಳೇ ಧರ್ಮರಾಜ ಹಾಗೂ ಗಂಗಾಧರ ಚಡಚಣ ಸೋದರರನ್ನು ಹತ್ಯೆ ಮಾಡಿದ್ದರೆನ್ನುವುದು ತಿಳಿದಿತ್ತು.

ಘಟನೆಗೆ ಸಂಬಂಧಿಸಿ ಇದುವರೆಗೆ ಪಿಎಸ್ ಐ ಗೋಪಾಲ ಅಳ್ಳೂರ ಸೇರಿದಂತೆ ಒಟ್ಟು ಹದಿನೈದು ಮಂದಿಯನ್ನು ಬಂಧಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا