Urdu   /   English   /   Nawayathi

10 ಮಂದಿ ದರೋಡೆಕೋರರು ಅರೆಸ್ಟ್..!

share with us

ಬೆಂಗಳೂರು: 15 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ವಾಯುವಿಹಾರ ಮಾಡು ತ್ತಿದ್ದ ವ್ಯಕ್ತಿಯನ್ನು ಇನ್ನೋವಾ ಕಾರಿನಲ್ಲಿ ಅಪಹರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಹತ್ತು ಮಂದಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿ 10 ಲಕ್ಷ ರೂ. ಬೆಲೆಬಾಳುವ 300 ಗ್ರಾಂ ಚಿನ್ನಾಭರಣ, 2 ಕಾರು, ಬೈಕನ್ನು ವಶಪಡಿಸಿಕೊಂಡಿದ್ದಾರೆ. ಪ್ರಶಾಂತ್ (26), ವಿನಯ ಕುಮಾರ್ (28), ರಘುವೀರ್ (22), ಪ್ರದೀಪ್ (30), ವಿಶ್ವನಾಥ್ (27), ಮಹೇಶ್ (24), ರಾಘವೇಂದ್ರ ರಾವ್ ಸಿಂಧೆ (28) , ವಿಜಯಕುಮಾರ್ (32), ಕಿಶೋರ್‍ಕುಮಾರ್(24) ಮತ್ತು ಹಳೆಗುಡ್ಡದ ಹಳ್ಳಿಯ ವಿಜಯಕುಮಾರ್ (24) ಬಂಧಿತ ದರೋಡೆಕೋರರು.

ಯಶವಂತಪುರದ ವೆಂಕಟೇಶ್ ಎಂಬುವರು ವಾಯು ವಿಹಾರ ಮಾಡುತ್ತಿದ್ದಾಗ ಮುಸುಕುಧಾರಿಗಳು ಇನ್ನೋವಾ ಕಾರಿನಲ್ಲಿ ಬಂದು ಅವರನ್ನು ಅಪಹರಣ ಮಾಡಿಕೊಂಡು ಹೋಗುತ್ತಿದ್ದಾಗ ವಿಷಯ ತಿಳಿದು ಇವರ ಮಗ ಜೀವನ್‍ಗೌಡ ಪೊಲೀಸರಿಗೆ ದೂರು ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ನೋಂದಣಿ ಸಂಖ್ಯೆಯನ್ನು ಪಡೆದು ಬೆನ್ನತ್ತಿದ್ದಾಗ ಕಾರನ್ನು ಹಿಂಬಾಲಿಸಿಕೊಂಡು ಬಜಾಜ್ ಪಲ್ಸರ್ ಬೈಕ್‍ನಲ್ಲಿ ಹೋಗುತ್ತಿದ್ದವರನ್ನು ಹಿಡಿಯಲು ಮುಂದಾದಾಗ ಬೈಕ್‍ನಿಂದ ಆಯತಪ್ಪಿ ಕೆಳಗೆ ಬಿದ್ದು ತಪ್ಪಿಸಿ ಕೊಳ್ಳಲು ಸಾಧ್ಯವಾಗದೆ ಆರೋಪಿ ಪ್ರಶಾಂತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದನು. ಅತ್ತ ಕಾರಿನಲ್ಲಿ ಅಪಹರಿಸಿದ್ದ ವೆಂಕಟೇಶ್‍ಗೌಡ ಅವರನ್ನು ನೆಲಮಂಗಲ, ಹೆಸರಘಟ್ಟ ಮುಂತಾದ ಕಡೆಗಳಲ್ಲಿ ಸುತ್ತಾಡಿಸಿ ಅವರ ಮೇಲೆ ಹಲ್ಲೆ ಮಾಡಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ಮೈಮೇಲಿದ್ದ ಸುಮಾರು 100 ಗ್ರಾಂ ತೂಕದ ಚಿನ್ನಾಭರಣ ಗಳನ್ನು ಕಸಿದುಕೊಂಡು ತದನಂತರ ಹೆಸರಘಟ್ಟ ರಸ್ತೆಯ ತೋಟಗೆರೆ ಬಳಿ ಕಾರಿನಿಂದ ವೆಂಕಟೇಶ್ ಅವರನ್ನು ತಳ್ಳಿ ಪರಾರಿಯಾಗಿದ್ದರು.

ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿ ಪ್ರಶಾಂತ್‍ನನ್ನು ತೀವ್ರ ವಿಚಾರಣೆಗೊಳಪಡಿಸಿ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ 10 ಲಕ್ಷ ರೂ. ಬೆಲೆಬಾಳುವ 300 ಗ್ರಾಂ ಚಿನ್ನಾಭರಣ, ಕಾರು, ಮಾರುತಿ ಝೆನ್ ಕಾರು, ಒಂದು ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا