Urdu   /   English   /   Nawayathi

ಮತ್ಸ್ಯಗಂಧ ರೈಲಿನಲ್ಲಿ ಕದ್ದು ಪರಾರಿಯಾಗುತ್ತಿದ್ದ ಕಳ್ಳರ ಬಂಧನ

share with us

ಭಟ್ಕಳ: 07ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮತ್ಸ್ಯಗಂಧ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಬ್ಯಾಗನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಶನಿವಾರದಂದು ಭಟ್ಕಳ ರೈಲ್ವೇ ಪೋಲೀಸರು ಬಂಧಿಸಿದ್ದಾರೆ. ಪ್ರಯಾಣಿಕರು ಮತ್ಸ್ಯಗಂಧ ರೈಲಿನಲ್ಲಿ ಉಡುಪಿಗೆ ಬಂದು ಇಳಿದು ತಮ್ಮ ಸಾಮಾನುಗಳನ್ನು ಇಳಿಸುವ ವೇಳೆ ತಮ್ಮ ಕುಟುಂಬ ಸಮೇತ ಗೋವಾ ತೆರಳುತ್ತಿದ್ದ ಆರೋಪಿಗಳಿಬ್ಬರು ಇವರ ಬ್ಯಾಗನ್ನು ಕದ್ದು ರೈಲಿನಲ್ಲಿ ಮುಂದಿನ ಪ್ರಯಾಣ ಬೆಳೆಸಿದರು. ತಮ್ಮ ಬ್ಯಾಗ್ ಕಳೆದುಕೊಂಡ ಕಾರ್ಕಳದ ನಿವಾಸಿ ಯಾರಿಜಾ ಜೋಸೆಫ್ ಮೆಂಡೋಸಾ ಅವರು ರೈಲ್ವೇ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ತಕ್ಷಣ ಪೋಲೀಸರು ಸಿ,ಸಿ,ಟಿ,ವಿ ಕ್ಯಾಮರಾ ಪರಿಶೀಲಿಸಿದರು. ಆರೋಪಿಗಳು ಬ್ಯಾಗನ್ನು ಕದ್ದು ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಖಚಿತವಾದ ಬಳಿಕ ಭಟ್ಕಳದ ರೈಲ್ವೇ ಪೋಲೀಸರಿಗೆ ಮಾಹಿತಿಯ ಜೊತೆಗೆ ಅವರ ಛಾಯಾಚಿತ್ರ ಕಳುಹಿಸಿದ ನಂತರ ಪೋಲೀಸರು ಬ್ಯಾಗಿನ ಸಮೇತ ಆರೋಪಿಗಳನ್ನು ಬಂಧಿಸುವುದರಲ್ಲಿ ಯಶಸ್ವಿಯಾದರು. ಬ್ಯಾಗಿನಲ್ಲಿದ್ದ 50,000 ಸಾವಿರ ನಗದು ಹಣ ಮತ್ತು ಸುಮಾರು 1,20,000 ಬೆಲೆ ಬಾಳುವ ಚಿನ್ನಾಭರಣವನ್ನು ವಶಕ್ಕೆ ಪಡೆದು ಆರೋಪಿಗಳಾದ ಅಹ್ಮದ್ ಶೇಖ್ ಮತ್ತು ಶಹೀರಾ ಶೇಖ್ ಇಬ್ಬರನ್ನು ಮಣಿಪಾಲ ಪೋಲೀಸರ ವಶಕ್ಕೆ ನೀಡಿದ್ದಾರೆ. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا