Urdu   /   English   /   Nawayathi

ನಾಯಿ ಬಳಿ ಕ್ಷಮೆ ಕೇಳದ ಟ್ರಕ್ ಚಾಲಕನನ್ನು ಇರಿದು ಕೊಂದರು..!

share with us

ನವದಹಲಿ: 07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮಿನಿ ಟ್ರಕ್ಕೊಂದು ನಾಯಿಗೆ ಉಜ್ಜಿಕೊಂಡು ಹೋಗಿದ್ದರಿಂದ ಶ್ವಾನದ ಬಳಿ ಕ್ಷಮೆ ಕೋರಲು ನಿರಾಕರಿಸಿದ ಚಾಲಕನನ್ನು ಗುಂಪೊಂದು ಭೀಕರವಾಗಿ ಇರಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ದುಷ್ಕರ್ಮಿಗಳ ದಾಳಿಗೆ ಒಳಗಾದ ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.ವಿಜೇಂದ್ರ ರಾಣಾ(40) ಕೊಲೆಗೀಡಾದ ಮಿನಿ ಟ್ರಕ್ ಚಾಲಕ. ತೀವ್ರ ಇರಿತಕ್ಕೆ ಒಳಗಾಗಿರುವ ಅವರ ಸಹೋದರ ರಾಜೇಶ್ ರಾಣಾ(48) ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.

ಘಟನೆ ವಿವರ :

ಆಗ್ನೇಯ ದೆಹಲಿಯ ಉತ್ತಮ್‍ನಗರ್‍ನ ಮೋಹನ್ ಗಾರ್ಡನ್ ಬಳಿ ನಿನ್ನೆ ತಡರಾತ್ರಿ ಮಿನಿ ಟ್ರಕ್ ನಿಲ್ಲಿಸುತ್ತಿದ್ದಾಗ ವಾಹನವು ಆಕಸ್ಮಿಕವಾಗಿ ಪಕ್ಕದಲ್ಲಿದ್ದ ಕಪ್ಪು ಬಣ್ಣದ ಲ್ಯಾಬ್ರಡೋರ್ ನಾಯಿಗೆ(ಟಾಮಿ) ಉಜ್ಜಿತು.  ಇದರಿಂದ ನಾಯಿ ಬೊಗಳಲು ಆರಂಭಿಸಿತು. ಈ ಶ್ವಾನದೊಂದಿಗೆ ವಾಯು ವಿಹಾರಕ್ಕೆ ಬಂದಿದ್ದ ಅಂಕಿತ್, ಪಾರನ್ ಮತ್ತು ದೇವ್ ಇದರಿಂದ ಕುಪಿತಗೊಂಡು ಜಗಳ ಆರಂಭಿಸಿದರು.

ಮಾಡಿದ ತಪ್ಪಿಗಾಗಿ ಟಾಮಿ ಬಳಿ ಕ್ಷಮೆ ಕೋರುವಂತೆ ರಾಣಾ ಅವರ ಕೂದಲು ಹಿಡಿದು ಎಳೆದಾಡಿದರು. ಇದಕ್ಕೆ ಅವರು ನಿರಾಕರಿಸಿದಾಗ ಚಾಕು ಮತ್ತು ಸ್ಕ್ರೂ ಡೈವರ್‍ಗಳಿಂದ ಆರು ಬಾರಿ ಚುಚ್ಚಿ ಕೊಲೆ ಮಾಡಿದರು. ಇವರ ಸಹಾಯಕ್ಕೆ ಧಾವಿಸಿದ ಸಹೋದರನಿಗೂ ಮೂರು ಬಾರಿ ಇರಿದರು. ಹತ್ತು ಜನರ ಕುಟುಂಬಕ್ಕೆ ಆಧಾರವಾಗಿದ್ದ ವಿಜೇಂದ್ರ ರಾಣಾ ಕ್ಷುಲ್ಲಕ ಕಾರಣಕ್ಕಾಗಿ ಶವವಾದರು.   ಘಟನೆ ಸಂಬಂಧ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا