Urdu   /   English   /   Nawayathi

ಇಂಡೋನೇಷ್ಯಾಕ್ಕೆ ನೆರವು

share with us

ವಾನಿ/ಹೊಸದಿಲ್ಲಿ: 04 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಇಂಡೋನೇಷ್ಯಾದ ಸುಲೇವಾಸಿಯಲ್ಲಿ ಸಂಭವಿಸಿದ ಭೂಕಂಪ-ಸುನಾಮಿಯಿಂದ ತೊಂದರೆಗೀಡಾದವರಿಗೆ ನೆರವು ನೀಡಲು ಭಾರತ ಸರಕಾರ ನಿರ್ಧರಿಸಿದೆ. ನೌಕಾಪಡೆಯ ಮೂರು ಹಡಗುಗಳಲ್ಲಿ ಮತ್ತು ಎರಡು ವಿಮಾನಗಳ ಮೂಲಕ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲು ವಿದೇಶಾಂಗ ಇಲಾಖೆ ನಿರ್ಧರಿಸಿದೆ. ಪ್ರಧಾನಿ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಫೋನ್‌ನಲ್ಲಿ ಮಾತುಕತೆ ನಡೆಸಿದ ಬಳಿಕ 'ಆಪರೇಷನ್‌ ಸಮುದ್ರ ಮೈತ್ರಿ' ಎಂಬ ಶಿರೋನಾಮೆಯ ಯೋಜನೆಯಡಿ ಪರಿಹಾರ ಮತ್ತು ನೆರವು ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ನಡುವೆ ಬುಧವಾರದ ವೇಳೆಗೆ ಭೂಕಂಪ-ಸುನಾಮಿಯಲ್ಲಿ ಅಸುನೀಗಿದವರ ಸಂಖ್ಯೆ 1,400ನ್ನು ದಾಟಿದೆ. 
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا