Urdu   /   English   /   Nawayathi

ತಮಿಳುನಾಡಿನ 1,500 ಬೆಸ್ತರನ್ನು ಬೆದರಿಸಿ ಓಡಿಸಿದ ಲಂಕಾ ಪಡೆ

share with us

ರಾಮೇಶ್ವರಂ: 30 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಭಾರತ ಮತ್ತು ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ಉಭಯ ದೇಶಗಳ ನಡುವಣ ಸಂಘರ್ಷ ಮುಂದುವರಿದಿದೆ. ಕಚ್ಚತೀವು ಬಳಿ ನಿನ್ನೆ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 1,500ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ ನೌಕಾಪಡೆ ಹೆದರಿಸಿ ಓಡಿಸಿದೆ. ಇದರಿಂದಾಗಿ ಬೆಸ್ತರು ಮೀನುಗಾರಿಕೆ ನಡೆಸದೇ ಹಿಂದುರುಗಿದ್ದಾರೆ.

275 ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ಬೆಸ್ತರು ಕಚ್ಚತೀವು ಜಲ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದಾಗ ಅಲ್ಲಿಗೆ ನಾಲ್ಕು ನೌಕೆಗಳಲ್ಲಿ ಧಾವಿಸಿದ ದ್ವೀಪರಾಷ್ಟ್ರದ ನೌಕಾ ಸಿಬ್ಬಂದಿ 10 ದೋಣಿಗಳ ಮೀನುಗಾರಿಕೆ ಬಲೆಗಳನ್ನು ಹರಿದು ಹಾಕಿದರು ಎಂದು ಯಾಂತ್ರೀಕೃತ ದೋಣಿಗಳ ಮೀನುಗಾರರ ಸಂಬಂಧ ಅಧ್ಯಕ್ಷ ಪಿ.ಸೇಸುರಾಜಾ ಆರೋಪಿಸಿದ್ದಾರೆ.

ಶ್ರೀಲಂಕಾ ನೌಕಾಪಡೆ ಯೋಧರು ಬೆಸ್ತರಿಗೆ ಬೆದರಿಕೆ ಹಾಕಿ ಅವರನ್ನು ಬೆನ್ನಟ್ಟಿದರು. ಇದರಿಂದ ಮೀನುಗಳನ್ನು ಹಿಡಿಯದೇ ಹಿಂದಿರುಗಿದರು ಎಂದು ಅವರು ತಿಳಿಸಿದ್ದಾರೆ. ಕಳೆದ ಶುಕ್ರವಾರ ರಾಮೇಶ್ವರಂ ಪ್ರಾಂತ್ಯದಲ್ಲಿ 600 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಇದೇ ರೀತಿ ಬೆದರಿಸಿ ವಾಪಸ್ ಕಳುಹಿಸಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا