Urdu   /   English   /   Nawayathi

ಯೋಧರ ಕತ್ತು ಸೀಳಿ, ಕಣ್ಣು ಕಿತ್ತ ಪಾ(ಪಿ)ಕಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ಕಾತರ

share with us

ಜೈಪುರ್: 23 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿ ಕೌರ್ಯ ಪ್ರದರ್ಶಿಸುತ್ತಿರುವ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ರಾಜಸ್ತಾನದ ರಾಜಧಾನಿ ಜೈಪುರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಕಿಸ್ತಾನ ಯೋಧರು ಮತ್ತು ಭಯೋತ್ಪಾದಕರ ಬರ್ಬರತೆಗೆ ತಕ್ಕ ಉತ್ತರ ನೀಡಬೇಕಿದೆ ಎಂದು ಆಕ್ರೋಶದಿಂದ ನುಡಿದರು.  ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯ ನಿರತ ಬಿಎಸ್‍ಎಫ್ ಯೋಧನ ಕತ್ತು ಸೀಳಿ ಕಣ್ಣು ಕಿತ್ತು ಹತ್ಯೆ ಮಾಡಿರುವ ಪ್ರಕರಣ ಹಾಗೂ ಮೂವರು ಪೊಲೀಸರನ್ನು ಅಪಹರಿಸಿ ಬರ್ಬರವಾಗಿ ಕೊಂದು ಹಾಕಿರುವ ಘಟನೆ ನಂತರ ಸೇನಾ ಮುಖ್ಯಸ್ಥರು ಪಾಕ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಪಾಕ್ ಸೈನಿಕರು ಮತ್ತು ಉಗ್ರಗಾಮಿಗಳಿ ಎಂದಿಗೂ ಇಂಥ ಕೃತ್ಯಗಳಿಗೆ ಕೈ ಹಾಕದಂತೆ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಭಾರತಕ್ಕೆ ಆಗಿರುವಂಥ ನೋವನ್ನು ಪಾಕಿಸ್ತಾನ ಕೂಡ ಅನುಭವಿಸಬೇಕಿದೆ ಎಂದು ಜನರಲ್ ರಾವತ್ ಹೇಳಿದರು.  ಪಾಕಿಸ್ತಾನ ತನ್ನ ನೆಲವನ್ನು ಉಗ್ರರು ಬಳಸುವುದಕ್ಕೆ ಅವಕಾಶ ನೀಡಬಾರದು. ಭಯೋತ್ಪಾದನೆಯನ್ನು ಮಟ್ಟ ಹಾಕಲು ಆ ದೇಶಕ್ಕೆ ಇಷ್ಟವಿಲ್ಲ. ಸೇನೆಯೇ ಅಲ್ಲಿನ ಉಗ್ರಗಾಮಿಗಳಿಗೆ ನೆರವಾಗುತ್ತಿದೆ ಎಂದು ಅವರು ಆರೋಪಿಸಿದರು.

ಪಾಕಿಸ್ತಾನವು ಮೇ ತಿಂಗಳಿನಲ್ಲಿ ಕದನ ವಿರಾಮಕ್ಕೆ ಮನವಿ ಮಾಡಿದ್ದರಿಂದ ನಾವೂ ಕೂಡ ಸಮ್ಮತಿ ನೀಡಿದೇವು. ಆದರೆ ಆ ದೇಶ ತನ್ನ ಮಾತು ತಪ್ಪಿ ಕುಕೃತ್ಯ ಮುಂದುವರಿಸಿದೆ. ಇದು ಹೀಗೆ ಮುಂದುವರಿದಲ್ಲಿ ನಾವು ಸರಿಯಾದ ಪಾಠ ಕಲಿಸುತ್ತೇವೆ ಎಂದು ಗಂಭೀರ ಎಚ್ಚರಿಕೆ ನೀಡಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا