Urdu   /   English   /   Nawayathi

ಯಲ್ಲಾಪುರದಲ್ಲಿ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ

share with us

ಯಲ್ಲಾಪುರ: 16 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಯಲ್ಲಾಪುರ ತಾಲೂಕಿನ ಕಣ್ಣಿಗೇರಿಯ ಬಳಿ ಶನಿವಾರದಂದು ಸಂಜೆ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರು ಜೋಯಿಡಾದ ನಿವಾಸಿ ಪ್ರವೀಣ್ ಮಂಜುನಾಥ್ ನಾಯ್ಕ್(24), ನೇತ್ರಾವತಿ ಮಂಜುನಾಥ್ ನಾಯ್ಕ್(45) ಹಾಗೂ ಮತ್ತೊಂದು ಬೈಕಿನ ಸವಾರ ಶಿರಸಿ ತಾಲೂಕಿನ ಸುಂಕಪ್ಪ ಕೋರವರ್ ಎಂದು ಹೇಳಲಾಗಿದೆ. ಆರೋಪಿ ಸುಂಕಪ್ಪ ಕಲ್ಯಾಳದಿಂದ ಯಲ್ಲಾಪುರದ ಕಡೆಗೆ ನಿರ್ಲಕ್ಷದಲ್ಲಿ ಅತಿ ವೇಗವಾಗಿ ಹೋಗುವಾಗ ಎದುರಿನಿಂದ ಬರುತ್ತಿದ್ದ ಪ್ರವೀಣ್ ಅವರ ಬೈಕಿಗೆ ಘರ್ಷಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕೆ,ಎಮ್,ಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا