Urdu   /   English   /   Nawayathi

ಬೆಂಗಳೂರಿನಲ್ಲಿ ಬೈಕ್ ಕದ್ದು ತಮಿಳುನಾಡಿನಲ್ಲಿ ಮಾರಾಟ

share with us

ಬೆಂಗಳೂರು: 12 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಬೈಕ್ ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರುತ್ತಿದ್ದ ಪ್ರಮುಖ ಆರೋಪಿ ಕುಮಾರ್ ಅಲಿಯಾಸ್ ಆನಂದ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತಮಿಳುನಾಡಿನ ಕಳ್ಳರಿಗೆ ನಗರದಲ್ಲಿ ಬೈಕ್ ಕಳವು ಮಾಡಲು ನೆರವಾಗುತ್ತಿದ್ದ. ನಗರದ ಕುಮಾರಸ್ವಾಮಿ ಲೇಔಟ್ ,ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡುತ್ತಿದ್ದ 

ತಮಿಳುನಾಡಿನ ಗ್ಯಾಂಗ್‌ ಜತೆ ಸಂಪರ್ಕ ಬೆಳೆಸಿಕೊಂಡು ಅವರ ಜತೆ ಸೇರಿ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ. ಕಳ್ಳತನವಾದ ಬಳಿಕ ನಿಗದಿತ ಹಣವನ್ನು ಆ ಗ್ಯಾಂಗ್‌ನಿಂದ ಪಡೆದು ಸುಮ್ಮನಿರುತ್ತಿದ್ದ. 

ಈತನ ಜತೆ ತಮಿಳುನಾಡಿನ ಆರೋಪಿಗಳನ್ನು ಕೂಡ ಬಂಧಿಸಿರುವ ಧರ್ಮಪುರಿ ಪೊಲೀಸರು ಆರೋಪಿಗಳಿಂದ ಕುಮಾರಸ್ವಾಮಿ ಲೇಔಟ್ ಮತ್ತು ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ 10 ಬೈಕ್‌ ವಶಕ್ಕೆ ಪಡೆದಿದ್ದಾರೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا