Urdu   /   English   /   Nawayathi

ನಿತೀಶ್‌ಗೆ ಏನಾಗಿದೆ? ಮೆಡಿಕಲ್‌ ಬುಲೆಟಿನ್‌ಗೆ ತೇಜಸ್ವಿ ಆಗ್ರಹ

share with us

ಪಟ್ನಾ: 08 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) 'ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಏನಾಗಿದೆ ? ಅವರ ಆರೋಗ್ಯದ ಬಗ್ಗೆ ರಾಜ್ಯ ಸರಕಾರ ಬೇಗನೆ ಒಂದು ಮೆಡಿಕಲ್‌ ಬುಲೆಟಿನ್‌ ಹೊರಡಿಸಬೇಕು' ಎಂದು ಆರ್‌ಜೆಡಿ ನಾಯಕ ಮತ್ತು ಮಾಜಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಆರೋಗ್ಯ  ಕಳೆದೊಂದು ವಾರದಿಂದ ಚೆನ್ನಾಗಿಲ್ಲ ಎಂದು ಕೇಳಿ ಬರುತ್ತಿದೆ. ಅವರು ಭಾಗವಹಿಸಬೇಕಿರುವ ಸರಕಾರದ ಅಧಿಕೃತ ಕಾರ್ಯಕ್ರಮಗಳನ್ನೆಲ್ಲ ರದ್ದು ಮಾಡಲಾಗಿದೆ. ಹಾಗಿರುವಾಗ ಅವರ ಆರೋಗ್ಯದ ಬಗ್ಗೆ ಜನರು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಆದುದರಿಂದ ರಾಜ್ಯ ಸರಕಾರ ಬೇಗನೆ ಅವರ ಆರೋಗ್ಯದ ಬಗ್ಗೆ ಒಂದು ಮೆಡಿಕಲ್‌ ಬುಲೆಟಿನ್‌ ಹೊರಡಿಸಬೇಕು ಎಂದು ಯಾದವ್‌ ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಇಂದು ಶನಿವಾರ ಆಗ್ರಹಿಸಿದರು. 

ಕಾನೂನು ಮತ್ತು ಸುವ್ಯವಸ್ಥೆಯನ್ನು  ಕಾಪಿಡುವಲ್ಲಿ ಸರಕಾರ ವಿಫ‌ಲವಾಗಿರುವ ಕಾರಣ ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಹದಿನೈದು ದಿನಗಳ ಹಿಂದಷ್ಟೇ ತೇಜಸ್ವಿ ಯಾದವ್‌ ಆಗ್ರಹಿಸಿದ್ದರು. ಮುಜಫ‌ರಪುರ ಆಶ್ರಯ ಮನೆಯ ಲೈಂಗಿಕ ಶೋಷಣೆ ಹಗರಣವು ದೇಶಾದ್ಯಂತ ಸುದ್ದಿ ಮಾಡಿತ್ತು.   

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا