Urdu   /   English   /   Nawayathi

ಕಲ್ಲು ಕೊರೆತವನ್ನು ನಿಲ್ಲಿಸಲು ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ಪಟ್ಟ ಶ್ರಮ

share with us

ಭಟ್ಕಳ: 06 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕೆಲವು ದಿನಗಳಿಂದ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ತಲಾಂದ್ ಎಂಬಲ್ಲಿ ಕಲ್ಲು ಕೊರೆತ ನಡೆಯುತ್ತಿದ್ದು, ಇದನ್ನು ಸ್ಥಳೀಯರು ಖಂಡಿಸುತ್ತಿದ್ದರು. ಇದನ್ನು ತಡೆಯಲು ಕೆಲವು ಮುಖ್ಯಸ್ಥರು ಇದರ ಹಿಂದೆ ಶ್ರಮ ಪಟ್ಟು ಇಂದು ಕೊರೆತವನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ತಲಾಂದ್ ಪ್ರದೇಶದಿಂದ ಸತೀಶ್ ಎಂಬಾತನು ಕಲ್ಲುಗಳನ್ನು ಕೊರೆದು ಲಾರಿಯಲ್ಲಿ ಸಾಗಿಸುವ ವೇಳೆ ಮೂಡ್ ಭಟ್ಕಳದ ಬೈ ಪಾಸಿನಲ್ಲಿ ಮುಟ್ಟಳ್ಳಿ ವ್ಯಾಪ್ತಿಯ ಶಾನುಭೋಗರು ಲಾರಿಯನ್ನು ತಡೆದು 20,000 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಲಾರಿಯ ಮಾಲೀಕ ಶಫೀಕ್ ಎಂದು ತಿಳಿದು ಬಂದಿದ್ದು, ಇನ್ನು ಮುಂದೆ ಕಲ್ಲು ಕೊರೆತವನ್ನು ಮಾಡದೇ ಇರುವ ಹಾಗೆ ನಿಷೇಧವನ್ನು ಹೇರಿದ್ದಾರೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا