Urdu   /   English   /   Nawayathi

ಫಸಲ್‌ ಬಿಮಾ ಅವ್ಯವಹಾರ, ಸಿಬಿಐ ತನಿಖೆಗೆ ಆಗ್ರಹ

share with us

ಬೆಂಗಳೂರು: 05 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ದೊಡ್ಡ ಮಟ್ಟದ ಅಕ್ರಮವಾಗಿದ್ದು ಸಿಬಿಐ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ. ಪ್ರದೇಶ ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಮೀಗ ಜತೆಗೆ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ''ರೈತರ ಹಿತದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಿದ್ದರೂ ಖಾಸಗಿ ವಿಮಾ ಕಂಪನಿಗಳಿಗೆ ಅನುಕೂಲವಾಗುತ್ತಿದೆ,'' ಎಂದು ಆರೋಪಿಸಿದರು. 

''ಯುಪಿಎ ಸರಕಾರವಿದ್ದಾಗ ಹಲವು ರೈತಸ್ನೇಹಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಫಸಲ್‌ ಬಿಮಾದಂತಹ ಯೋಜನೆ ತಂದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ,'' ಎಂದು ಆಪಾದಿಸಿದರು. 

''ಬೀದರ್‌ ಜಿಲ್ಲೆಯಲ್ಲಿ 2017-18 ರಲ್ಲಿ ಫಸಲ್‌ಬಿಮಾದಡಿ 1.80 ಲಕ್ಷ ರೈತರು ನೋಂದಣಿ ಮಾಡಿಕೊಂಡು 14.25 ಕೋಟಿ ರೂ. ವಿಮಾ ಕಂತು ಪಾವತಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಲಾ 85.99 ಕೋಟಿ ರೂ. ಸಂದಾಯ ಮಾಡಿವೆ. ಆದರೆ, ರೈತರಿಗೆ ಕೇವಲ 84 ಲಕ್ಷ ರೂ. ವಾಪಸ್‌ ಸಿಕ್ಕಿದೆ. ಉಳಿದ ಹಣ ವಿಮಾ ಕಂಪನಿಯ ಪಾಲಾಗಿದೆ,''ಎಂದು ಆರೋಪಿಸಿದರು. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا