Urdu   /   English   /   Nawayathi

ಜಯಲಲಿತಾಗೆ ಚಿಕಿತ್ಸೆ ನೀಡಿದ್ದ ಮೂವರು ಏಮ್ಸ್ ವೈದ್ಯರಿಗೆ ಸಮನ್ಸ್

share with us

ಚೆನ್ನೈ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ ಅವರ ಸಾವಿಗೆ ಕಾರಣವಾದ ಸಂಗತಿಗಳ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ಆಯೋಗ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯ ಮೂವರು ವೈದ್ಯರಿಗೆ ಸಮನ್ಸ್ ಜಾರಿಗೊಳಿಸಿದೆ. ಆಗಸ್ಟ್ 23 ಮತ್ತು 24ರಂದು ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾಗ ಈ ಮೂವರು ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರು.

ಏಮ್ಸ್‍ನ ಪಲ್ಮೋಲಾಜಿ ವಿಭಾಗದ ಡಾ.ಜಿ.ಸಿ. ಖಿಲಾನಿ, ಅನೆಸ್ತೇಷಿಯಾಲಜಿ ಪ್ರೊಫೆಸರ್ ಅಂಜನ್ ತ್ರಿಖಾ ಹಾಗೂ ಕಾರ್ಡಿಯೋಲಜಿ ವಿಭಾಗದ ಪ್ರೊಫೆಸರ್ ನಿತೀಶ್ ನಾಯಕ್ ಅವರಿಗೆ ಆಯೋಗವು ಸಮನ್ಸ್ ಗಳನ್ನು ಜಾರಿಗೊಳಿಸಿದೆ. ಸೆಪ್ಟೆಂಬರ್ 22 ರಿಂದ ಡಿಸೆಂಬರ್ 5ರವರೆಗೆ ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಏಮ್ಸ್‍ನ ಈ ನುರಿತ ತಜ್ಞ ವೈದ್ಯರು ಆಗಾಗ ಭೇಟಿ ನೀಡಿ ತಪಾಸಣೆ ನಡೆಸಿ, ಅನುಸರಿಸಬೇಕಾದ ಚಿಕಿತ್ಸೆ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا