Urdu   /   English   /   Nawayathi

ಆತಂಕ ಸೃಷ್ಟಿಸಿದ ಬಿಳಿ ನೊರೆ

share with us

ಸುರತ್ಕಲ್‌: 13 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕುತ್ತೆತ್ತೂರು ಗ್ರಾಮದ ಮೂಡುಪದವು ಬಳಿಯ ಕೆಂಗಲ್‌, ಅತ್ರುಕೋಡಿಯಲ್ಲಿ ಬಿಳಿ ನೊರೆಯ ನೀರು ಕಂಡುಬಂದಿದ್ದು ಸಮೀಪದ ತೋಡುಗಳಲ್ಲಿ ಹರಿದು ಹೋಗುತ್ತಿದ್ದು, ಸಾರ್ವಜನಿಕರು ಆತಂಕಗೊಳ್ಳುವಂತೆ ಮಾಡಿದ ಘಟನೆ ಶುಕ್ರವಾರ ಸಂಭವಿಸಿದೆ. ಇಲ್ಲಿಯ ಮಳೆ ನೀರು ಹರಿಯುವ ತೋಡು ನೇರವಾಗಿ ನಂದಿನಿ ನದಿಗೆ ಸೇರುತ್ತದೆ. ತೋಡಿನಲ್ಲಿ ಬಿಳಿ ನೊರೆ ನೀರು ಕಂಡು ಸ್ಥಳೀಯ ಗ್ರಾಮ ಪಂಚಾಯತ್‌ ಸದಸ್ಯ ರಾಮಪ್ರಸಾದ್‌ ಪಂಡಿತ್‌ ಎಂಆರ್‌ ಪಿಎಲ್‌ ಸಂಸ್ಥೆಯ ಅ ಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಪೆರ್ಮುದೆ ಭಾಗದಲ್ಲಿ ಕಪ್ಪು ಬಣ್ಣದ ಹುಡಿ ಮರ ಗಿಡ, ಮನೆ ಮಾಡುಗಳಲ್ಲಿ ಕಂಡು ಬಂದಿದ್ದು, ಗಾಳಿಯಲ್ಲಿ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಟಾರ್‌ ಮಿಶ್ರಿತ ಕಪ್ಪು ನೀರು ಹರಿದ ಘಟನೆ ಸಂಭವಿಸಿದ್ದು, ಕೃಷಿ ಹಾನಿಗೊಳಗಾದ ರೈತರಿಗೆ ಸಂಸ್ಥೆ ಪರಿಹಾರ ವಿತರಿಸಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಯಾವುದೇ ತೊಂದರೆಯಿಲ್ಲ
ಕುತ್ತೆತ್ತೂರು ಕೆಂಗಲ್‌, ಅತ್ರುಕೋಡಿಯಲ್ಲಿ ಬಿಳಿ ನೊರೆ ಹರಿಯುವಿಕೆ ಸಂಬಂಧ ಎಂಆರ್‌ಪಿಎಲ್‌ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಂಕ್ರೀಟ್‌ ಮಿಕ್ಸರ್‌ ಹಾಕುವ ಸಂದರ್ಭ ಸೋರಿಕೆ ತಡೆಗಟ್ಟಲು ಲಿಕ್ವಿಡ್‌ ಒಂದನ್ನು ಬಳಸಲಾಗುತ್ತದೆ. ಅತಿಯಾಗಿ ಮಳೆ ಸುರಿದಾಗ ಕಾಂಕ್ರೀಟ್‌ ಕಾಮಗಾರಿ ನಡೆಸಿದ ಸ್ಥಳದಲ್ಲಿ ಮಳೆ ನೀರಿನೊಂದಿಗೆ ಈ ಲಿಕ್ವಿಡ್‌ ಸೇರಿಕೊಂಡು ನೊರೆ ಸೃಷ್ಟಿಯಾಗಿದೆ. ಕೃಷಿ ಸಹಿತ ಯಾವುದೇ ಚಟುವಟಿಕೆಗಳಿಗೂ ಇದರಿಂದ ತೊಂದರೆಯಾಗದು ಎಂದು ಅವರು ಹೇಳಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا