Urdu   /   English   /   Nawayathi

ಪೋಟೊ ತೆಗೆಯಲೆಂದು ರೈಲು ಎಂಜಿನ್‌ ಏರಿ ವಿದ್ಯುತ್‌ ಸ್ಪರ್ಶಕ್ಕೆ ಬಲಿ

share with us

ಪುಣೆ: 13 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ರೈಲಿನ ಎಂಜಿನ್‌ನ ಮೇಲ್ಭಾಗಕ್ಕೆ ಹತ್ತಿ ಪೋಟೊ ತೆಗೆಯುತ್ತಿರುವಾಗ ವಿದ್ಯುತ್‌ ತಂತಿ ತಗುಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಭೆಗ್ದೆವಾಡಿಯ ರೈಲು ನಿಲ್ದಾಣದಲ್ಲಿ ಎಂಜಿನ್‌ ಮೇಲೆ ಹತ್ತಿ ಪೋಟೊ ತೆಗೆಯಲು ಮುಂದಾಗಿದ್ದಾಗ ಬಾಲಕನಿಗೆ ವಿದ್ಯುತ್‌ ವೈರ್‌ ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡು ಕೆಳಗೆ ಬಿದ್ದಿದ್ದಾನೆ. ಗಾಯಗೊಂಡಿದ್ದ ಆತ ಐದು ದಿನಗಳ ಬಳಿಕ ಔಂದ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 

ಮೂಲತಃ ಒಡಿಶಾ ಕುಟುಂಬದ ಈ ಬಾಲಕ ಸಾಂಗ್ವಿ ನಿವಾಸಿ. ಕುಟುಂಬ ಮತ್ತು ಸ್ನೇಹಿತರ ಜತೆ ತಲೇಗಾಂವ್‌ ದಭದೆಗೆ ಟ್ರಿಪ್‌ ಹೊರಟಿದ್ದು, ಭೆಗ್ದೆವಾಡಿಯ ರೈಲು ಹತ್ತಿದ್ದರು. ಬಾಲಕ ಪೋಟೊ ತೆಗೆಯಲೆಂದು ನಿಲ್ದಾಣದಲ್ಲಿದ್ದ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಹತ್ತಿದ್ದ. ಪೋಟೊ ತೆಗೆಯುತ್ತಿರುವಾಗ ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ಬಂದಿದೆ. ತಕ್ಷಣವೇ ಈತನಿಗೆ ಎಂನಿನ್‌ ಮೇಲಿನಿಂದ ವಿದ್ಯುತ್‌ ಪ್ರವಹಿಸುತತಿದ್ದ ತಂತಿ ತಾಗಿದೆ. 
ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا