Urdu   /   English   /   Nawayathi

ಮಂಡ್ಯ: ಭೀಕರ ಅಪಘಾತದಲ್ಲಿ ಛಿದ್ರ ಛಿದ್ರಗೊಂಡ ಬೈಕ್ ಸವಾರರ ಮೃತದೇಹ!

share with us

ಮಂಡ್ಯ: 12 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟಿಪ್ಪರ್ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೃತಪಟ್ಟಿದ್ದು ಡಿಕ್ಕಿ ರಭಸಕ್ಕೆ ಸವಾರರ ಮೃತದೇಹ ಛಿದ್ರ ಛಿದ್ರಗೊಂಡು ರಸ್ತೆಯಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅಪಘಾತದ ಬಳಿಕ ಲಾರಿಯನ್ನು ನಿಲ್ಲಿಸಿ ಪರಾರಿಯಾಗುತ್ತಿದ್ದ ಕುಡುಕ ಲಾರಿ ಚಾಲಕನನ್ನು ಸ್ಥಳೀಯರು ಹಿಡಿದು ಹಿಗ್ಗಾ ಮುಗ್ಗಾ ಥಲಿಸಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರ ಮೃತದೇಹ ಲಾರಿ ಚಕ್ರಕ್ಕೆ ಸಿಲುಕಿ ಸುಮಾರು 250 ಮೀಟರ್ ವರೆಗೆ ಎಳೆದುಕೊಂಡಿದ್ದು ರಸ್ತೆ ಎಲ್ಲಾ ರಕ್ತಮಯವಾಗಿದ್ದು ಸವಾರರ ಗುರುತು ಸಿಗದಷ್ಟು ಕುರೂಪವಾಗಿದೆ.

ಬೈಕ್ ಸವಾರರು ಯಾರು ಎಲ್ಲಿಯವರು, ಎಲ್ಲಿಗೆ ಹೋಗುತ್ತಿದ್ದರು ಎಂಬುದು ಇನ್ನು ತಿಳಿದಿಲ್ಲ. ಮಂಡ್ಯ ಗ್ರಾಮಾಂತರ ಪೊಲೀಸರು ಅಪಘಾತ ಸ್ಥಳದಲ್ಲಿ ಬಿಡು ಬಿಟ್ಟಿದ್ದು ಛಿದ್ರ ಛಿದ್ರವಾಗಿ ಬಿದ್ದಿರುವ ದೇಹದ ತುಂಡುಗಳನ್ನು ಕವರ್ ಗೆ ತುಂಬಿಕೊಂಡಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا