Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು
ಹೊಸದಿಲ್ಲಿ: 12 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಟ್ರಾಯ್ ಮುಖ್ಯಸ್ಥರ ಆಧಾರ್ ಸವಾಲು ವ್ಯಾಪಕ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಜನರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಲು ವಿಶಿಷ್ಟ ಭಾರತೀಯ ಗುರುತು ಪ್ರಾಧಿಕಾರ (ಯುಐಡಿಎಐ) ಮುಂದಾಗಿದೆ. ಸಾರ್ವಜನಿಕರು ತಮ್ಮ ಆಧಾರ್ ಸಂಖ್ಯೆ, ಪಾನ್, ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್/ ಡೆಬಿಟ್ ಕಾರ್ಡ್ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು- ಅದರಲ್ಲೂ ವಿಶೇಷವಾಗಿ ಟ್ವಿಟರ್, ಫೇಸ್ಬುಕ್ನಂತಹ ಜಾಲತಾಣಗಳಲ್ಲಿ ಪ್ರದರ್ಶಿಸುವುದು ಒಳಿತಲ್ಲ; ಇದರಿಂದ ಅನಗತ್ಯವಾಗಿ ಖಾಸಗಿತನದ ಉಲ್ಲಂಘನೆಯಾಗಬಹುದು ಎಂದು ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರಾಧಿಕಾರ ಉದ್ದೇಶಿಸಿದೆ.
'ಅಗತ್ಯವಿದ್ದಲ್ಲಿ ಆಧಾರ್ ಅನ್ನು ಮುಕ್ತವಾಗಿ, ಧೈರ್ಯವಾಗಿ ಬಳಸಬಹುದು. ಈ ಕುರಿತು ವಿವರವಾದ ಪ್ರಶ್ನೋತ್ತರಗಳನ್ನು ನೀಡಲಾಗುವುದು' ಎಂದು ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಭೂಷಣ್ ಪಾಂಡೆ ಪಿಟಿಐಗೆ ತಿಳಿಸಿದರು.
ಟ್ರಾಯ್ ಮುಖ್ಯಸ್ಥ ಆರ್.ಎಸ್ ಶರ್ಮಾ ತಮ್ಮ ಆಧಾರ್ ಸಂಖ್ಯೆಯನ್ನು ಟ್ವಿಟರ್ನಲ್ಲಿ ಬಹಿರಂಗಪಡಿಸಿ ತಮಗೆ 'ನಿಜಕ್ಕೂ ಅಪಾಯ'ವಾಗುವಂತಹ ರೀತಿಯಲ್ಲಿ ಯಾವ ಮಾಹಿತಿ ಕದಿಯಬಲ್ಲಿರಿ? ಎಂದು ನೆಟ್ಟಿಗರಿಗೆ ಸವಾಲು ಹಾಕಿದ ಬಳಿಕ ಈ ಚರ್ಚೆ ಕಾವೇರಿತ್ತು.
ಆ ಬಳಿಕ ಸಾರ್ವಜನಿಕ ವಲಯದಲ್ಲಿ ಚರ್ಚಿಸಲಾದ ಹಲವು ಪ್ರಶ್ನೆಗಳು, ಆತಂಕಗಳಿಗೆ ಯುಐಡಿಎಐ ಸಮಾಧಾನಕರ ಉತ್ತರವನ್ನು ಈ 'ಎಫ್ಎಕ್ಯೂ' ನಲ್ಲಿ (ಪದೇ ಪದೇ ಕೇಳುವ ಪ್ರಶ್ನೆಗಳು) ನೀಡಲಿದೆ.
ಸಾರ್ವಜನಿಕವಾಗಿ 12 ಅಂಕಿಗಳ ಆಧಾರ್ ಸಂಖ್ಯೆ ಪ್ರದರ್ಶಿಸದಂತೆ ಯುಐಡಿಎಐ ಇತ್ತೀಚೆಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ, ಆಧಾರ್ನ ಮುಕ್ತ ಬಳಕೆ ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಇತರ ವಿವರಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ನೀಡುವಂತೆ, ಆಧಾರ್ ಸಂಖ್ಯೆಯನ್ನು ಗುರುತು ದೃಢೀಕರಣ ಮತ್ತು ಹಣಕಾಸು ವ್ಯವಹಾರಗಳಲ್ಲಿ ಮುಕ್ತವಾಗಿ ಬಳಸಬಹುದು ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಕೇವಲ ಆಧಾರ್ ಸಂಖ್ಯೆ ಬೇರೆಯವರಿಗೆ ಗೊತ್ತಾದ ಮಾತ್ರಕ್ಕೆ ಏನೂ ಹಾನಿಯಿಲ್ಲ; ನಕಲಿ ವ್ಯವಹಾರಗಳ ದೃಢೀಕರಣಕ್ಕೆ ಅದನ್ನು ದುರ್ಬಳಕೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಪ್ರತಿಬಾರಿ ಆಧಾರ್ ಗುರುತು ದೃಢೀಕರಣಕ್ಕೂ ನೈಜ ಆಧಾರ್ ಕಾರ್ಡ್ದಾರರ ಮೊಬೈಲ್ಗೆ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಬರುತ್ತದೆ. ಅದನ್ನು ನೈಜ ವ್ಯಕ್ತಿ ಮರಳಿ ಕಳಿಸಿದ ಬಳಿಕವಷ್ಟೇ ಆಧಾರ್ ದೃಢೀಕರಣ ಪ್ರಕ್ರಿಯೆ ಮುಂದುವರಿಯುತ್ತದೆ. ಅಲ್ಲದೆ ಬಯೋಮೆಟ್ರಿಕ್ ವಿವರಗಳಿಗೆ ಹಲವು ಸ್ತರಗಳ ಭದ್ರತೆ ಇರುತ್ತದೆ. ಹೀಗಾಗಿ ಇತರ ಗುರುತು ಪತ್ರಗಳಿಗಿಂತ ಆಧಾರ್ ಹೆಚ್ಚು ಸುರಕ್ಷಿತವಾಗಿದೆ ಎಂದು ಯುಐಡಿಎಐ ಹೇಳಿದೆ.
ಕೇವಲ ಆಧಾರ್ ಸಂಖ್ಯೆ ಗೊತ್ತಾದ ಮಾತ್ರಕ್ಕೆ ನಕಲಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವುದು ಅಥವಾ ಹಣ ವಿತ್ಡ್ರಾ ಮಾಡಿಕೊಂಡು ವಂಚಿಸಲು ಸಾಧ್ಯವೆ ಎಂಬ ಪ್ರಶ್ನೆಗಳಿಗೂ ಪ್ರಾಧಿಕಾರ ಉತ್ತರಿಸಲಿದೆ.
ಆಧಾರ್ ಮೂಲಕ ಗ್ರಾಹಕರ ದೃಢೀಕರಣ ಬಯಸುವ ಬ್ಯಾಂಕ್ಗಳು ಮತ್ತು ಇತರ ಸಂಸ್ಥೆಗಳಿಗೂ ಮಾಹಿತಿ ರಕ್ಷಣೆ ಮತ್ತು ನಿರ್ಲಕ್ಷ್ಯದ ವಿರುದ್ಧ ಕಠಿಣ ನಿಯಮಗಳನ್ನು ರೂಪಿಸಲಾಗಿದೆ ಎಂದು ಯುಐಡಿಎಐ ಹೇಳಿದೆ.
ವಿ, ಕ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |