Urdu   /   English   /   Nawayathi

ಭಟ್ಕಳದಲ್ಲಿ ರಾಬಿತಾ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

share with us

ಭಟ್ಕಳ: 11 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಶುಕ್ರವಾರದಂದು ಸಂಜೆ ಸುಮಾರು 5ಗಂಟೆಗೆ ಭಟ್ಕಳದ ಅಂಜುಮನ್ ಮೈದಾನದಲ್ಲಿ ರಾಬಿತಾ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಜಿ ಪರಮೇಶ್ವರ್ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ಕಾರ್ಯದರ್ಶಿಗಳಾದ ಝಫರ್ಯಾಬ್ ಜಿಲಾನೆ ಹಾಗೂ ಮತ್ತಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಕುರ್ ಆನ್ ಪಠಿಸುವುದರ ಮೂಲಕ ಪ್ರಾರಂಭಗೊಂಡಿತು. ಶಿಕ್ಷಣದ ಮೈದಾನದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಹಾಗೂ ಜಿಲ್ಲೆ ಮಟ್ಟದ ಶಿಕ್ಷಣ ಮೈದಾನದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೂ ರಾಬಿತಾ ಅವರ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಕೊಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿ ಪರಮೇಶ್ವರ್ ಅವರು ಸಭೆಯನ್ನು ಕುರಿತು ಕೆಲವು ಮಾತುಗಳನ್ನಾಡಿದರು. ಬಹುಮಾನವನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ನಾವು ಅತಿ ಹೆಚ್ಚು ಆದ್ಯತೆಯನ್ನು ಕೊಡುತ್ತೇವೆ. ಹೊರ ದೇಶಗಳಲ್ಲಿ ಈಗಲೂ ನಮ್ಮ ದೇಶದ ಹಲವಾರು ವ್ಯಕ್ತಿಗಳು ಉನ್ನತ ಶ್ರೇಣಿಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಈ ರೀತಿಯ ಪುರಸ್ಕಾರಗಳನ್ನು ಕೊಡುವುದರಿಂದ ಓದುವ ಮಕ್ಕಳಲ್ಲಿ ಉತ್ಸಾಹ ಇನ್ನಷ್ಟು ಹೆಚ್ಚುತ್ತದೆ ಎಂದು ಹೇಳಿದರು.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا