Urdu   /   English   /   Nawayathi

ದೇಶಭ್ರಷ್ಟ ಕಾಯ್ದೆ ಅಡಿ ನೀರವ್, ಕುಟುಂಬಸ್ಥರಿಗೆ ಕೋರ್ಟ್ ನೋಟಿಸ್

share with us

ನವದೆಹಲಿ: 11 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕೋಟ್ಯಂತರ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಳಂಕಿತ ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಆತನ ಕುಟುಂಬದ ಸದಸ್ಯರಿಗೆ ಹೊಸ ಕಾನೂನು ಕಂಟಕ ಎದುರಾಗಿದೆ.  ಈ ಪ್ರಕರಣದಲ್ಲಿ ಸೆಪ್ಟೆಂಬರ್ 25ರೊಳಗೆ ತನ್ನ ಮುಂದೆ ಹಾಜರಾಗುವಂತೆ ಮುಂಬೈನ ವಿಶೇಷ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ನ್ಯಾಯಾಲಯವು ನೀರವ್, ಆತನ ಸಹೋದರ ಮತ್ತು ಸಹೋದರಿಗೆ ಸಾರ್ವಜನಿಕ ಸಮನ್ಸ್ ಗಳನ್ನು ಜಾರಿಗೊಳಿಸಿದೆ.

ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ, ದೊಡ್ಡ ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಗೆ ಬಂದಿರುವ ಹೊಸ ಕಾಯ್ದೆ ಅಡಿ ಅವರ ಅಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋರ್ಟ್ ತಿಳಿಸಿದೆ. ಈ ಸಂಬಂಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್. ಅಜ್ಮಿ ಅವರು, ನೀರವ್ ಮೋದಿ, ಸಹೋದರ ನೀಶಾಲ್ ಮೋದಿ ಮತ್ತು ಸಹೋದರಿ ಪೂರ್ವಿ ಮೋದಿ ಅವರಿಗೆ ಪ್ರಮುಖ ದಿನಪತ್ರಿಕೆಗಳ ಮೂಲಕ ಮೂರು ಸಾರ್ವಜನಿಕ ನೋಟಿಸ್‍ಗಳನ್ನು ಜಾರಿಗೊಳಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا