Urdu   /   English   /   Nawayathi

ಪ್ರಧಾನಿ ಮೋದಿ ದೊಡ್ಡ ಉಗ್ರ, ಮಾನವೀಯತೆಯ ಹಂತಕ: ಎನ್‌ಸಿ ಶಾಸಕ ರಾಣಾ

share with us

ಪೂಂಚ್‌(ಜಮ್ಮು ಮತ್ತು ಕಾಶ್ಮೀರ): 09 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನ್ಯಾಷನಲ್‌ ಕಾನ್ಫ‌ರೆನ್ಸ್‌(ಎನ್ ಸಿ) ಶಾಸಕ ಜಾವೇದ್‌ ರಾಣಾ ಅವರು, ಪ್ರಧಾನಿ ಮೋದಿ ಒಬ್ಬ ದೊಡ್ಡ ಉಗ್ರ ಮತ್ತು ಮಾನವೀಯತೆಯ ಹಂತಕ ಎಂದು ಟೀಕಿಸಿದ್ದಾರೆ. ಅತೀ ದೊಡ್ಡ ಭಯೋತ್ಪಾದಕ ಮತ್ತು ಮಾನವೀಯತೆಯ ಹಂತಕ ನಮ್ಮ ದೇಶದ ಪ್ರಧಾನಿಯಾಗಿರುವುದು ದುರದೃಷ್ಟಕರ ಎಂದಿರುವ ರಾಣಾ, ಗುಜರಾತ್ ನಲ್ಲಿ ಲಕ್ಷಾಂತರ ಮಂದಿಯನ್ನು ಕೊಂದ ಕೊಲೆಗಾರ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಕಳೆದ ಸೋಮವಾರ ಪೂಂಚ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಣಾ ಮಾತನಾಡಿದ ವಿಡಿಯೋ ಇಂದು ಬಹಿರಂಗವಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

ಶಾಸಕ ರಾಣಾ ಅವರು ಈ ಹಿಂದೆಯೂ ಇದೇ ರೀತಿಯ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ಸಂವಿಧಾನದ 35ಎ ಮತ್ತು 370ನೇ ವಿಧಿಯನ್ನು ಬದಲಾಯಿಸಿದಲ್ಲಿ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದಿಲ್ಲ ಎಂದು ಇತ್ತೀಚಿಗೆ ಹೇಳಿದ್ದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا