Urdu   /   English   /   Nawayathi

ಚೂರಿ ಹಿಡಿದು ಕೇರಳ ಭವನಕ್ಕೆ ನುಗ್ಗಿದವನಿಗೆ ತಡೆ; ಸಿಎಂ ಟಾರ್ಗೆಟ್‌ ?

share with us

ಹೊಸದಿಲ್ಲಿ: 04 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಚೂರಿ ಹಿಡಿದು ಕೇರಳ ಭವನದೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಭದ್ರತಾ ಸಿಬಂದಿಗಳು ತಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಸಿಎಂ ಪಿಣರಾಯಿ ವಿಜಯನ್‌ ಅವರು ಕೇರಳ ಭವನದ ಒಳಗಿದ್ದ ವೇಳೆಯಲ್ಲೇ ಈ ಘಟನೆ ನಡೆದಿದೆ. ಚೂರಿ ಸಮೇತ ಒಳನುಗ್ಗಲು ಯತ್ನಿಸಿದವನನ್ನು ಹತ್ತಕ್ಕೂ ಹೆಚ್ಚು ಭದ್ರತಾ ಸಿಬಂದಿಗಳು ತಡೆದು ನೆಲಕ್ಕೆ ಬೀಳಿಸಿದರು. 

ಬಂಧಿತ ವ್ಯಕ್ತಿ ಮಾನಸಿಕವಾಗಿ ಸಮತೋಲನ ಕಳೆದುಕೊಂಡವನಂತೆ ಕಂಡು ಬಂದಿದ್ದು ಆತನನ್ನು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸ್‌ ಗೆ ಕರೆದೊಯ್ಯಲಾಗಿದೆ. ವಿಚಾರಣೆ ಮುಂದುವರಿದಿದೆ. 

ಜಮ್ಮುವಿನಲ್ಲಿ ಮಾಜಿ ಸಿಎಂ ಫಾರೂಕ್‌ ಅಬ್‌ದುಲ್ಲಾ ಮನೆಗೆ ದುಷ್ಕರ್ಮಿಯೊಬ್ಬ ನುಗ್ಗಲು ಯತ್ನಿಸಿ ಹತ್ಯೆಗೀಡಾದ ದಿನವೇ ಈ ಘಟನೆ ನಡೆದಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا