Urdu   /   English   /   Nawayathi

ಕಂಡ್ಲೂರು: ಗುರುಭಟ್ ಕೊಲೆ ಆರೋಪಿಗಳೊಂದಿಗೆ ಸ್ಥಳ ಮಹಜರು

share with us

ಕುಂದಾಪುರ: 01 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಮಣಿಪಾಲ-ಪೆರಂಪಳ್ಳಿ ರಸ್ತೆಯ ಸೆವೆನ್ತ್ ಹೆವೆನ್ ಹೊಟೇಲ್ ಕಟ್ಟಡದಲ್ಲಿನ ಇಸ್ಪೀಟ್ ಕ್ಲಬ್ಬಿನಲ್ಲಿ ಕೊಲೆಯಾದ ಉದ್ಯಮಿ ಗುರುಪ್ರಸಾದ್ ಭಟ್ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕಂಡ್ಲೂರು ಸೇತುವೆ ಬಳಿ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಆರೋಪಿಗಳಾದ ರಂಜಿತ್ ಪಿಂಟೊ, ಸುಜಿತ್ ಪಿಂಟೊ, ಪ್ರದೀಪ್ ಮತ್ತು ರಾಜೇಶ್ ಪೂಜಾರಿಯವರನ್ನು ಪ್ರಕರಣದ ತನಿಖಾಧಿಕಾರಿ ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್ ಅವರ ನೇತೃತ್ವದಲ್ಲಿ ಕರೆತಂದ ಪೊಲೀಸರು ಆರೋಪಿಗಳು ಚೂರಿಯನ್ನು ನದಿಗೆ ಎಸೆದಿದ್ದಾರೆನ್ನಲಾದ ಕಂಡ್ಲೂರು ಸೇತುವೆ ಬಳಿಯ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದರು.

ಆರೋಪಿಗಳು ಕೊಲೆಗೆ ಬಳಸಿದ ಚೂರಿ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಆರೋಪಿಗಳ ಮೂರು ದಿನಗಳ ಪೊಲೀಸ್ ಕಸ್ಟಡಿ ಬಳಿಕ ಆ. 2ರಂದು ನ್ಯಾಯಾಲಯಕ್ಕೆ  ಆರೋಪಿಗಳನ್ನು ಹಾಜರುಪಡಿಸಲಾಗುವುದು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا